ವಿಜಯಪುರ: ಶಿಕ್ಷಕರು ಶಿಲ್ಪಿಯಾಗಿ ಕಾರ್ಯನಿರ್ವಹಿಸಲು ಪೋಷಕರು ತಮ್ಮ ಶಿಲೆಯು ಯಾವ ಗುಣಮಟ್ಟದ್ದು ಅದರ ಗುಣ ವಿಶೇಷತೆ ಏನು" ಎಂಬುದನ್ನು ಶಿಲ್ಪಿಯೊಂದಿಗೆ ಸಮಾಲೋಚನೆ ನಡೆಸಬೇಕೆಂದು ಹಿರಿಯ ಉಪನ್ಯಾಸಕಿ ಸಕೀನಾ ಪಾಟೀಲ್ ತಿಳಿಸಿದರು.
14 ನವಂಬರ್ 2025 ರಂದು ಮಕ್ಕಳ ದಿನಾಚರಣೆಯ ನಿಮಿತ್ಯವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪೋಷಕ ಉಪನ್ಯಾಸಕರ ಮಹಾ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವವನ್ನು ತಿಳಿಸಿ ಮಾತನಾಡಿ ಶಿಲ್ಪಿಯೊಂದಿಗೆ ಪೋಷಕರು ಸಮಾಲೋಚನೆ ನಡೆಸಬೇಕು, ಆಗಾ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಸಹಕಾರಿಯಾಗುತ್ತದೆ. ಮಕ್ಕಳು ಮತ್ತು ಶಿಕ್ಷಕರ ನಡುವಿನ ಸಂಭಂದ ಉತ್ತಮವಾಗಿದ್ದಾಗ ಮಾತ್ರ ಗುಣಮಟ್ಟದ ಶಿಕ್ಷಣ ಕೊಡಲು ಸಹಕಾರಿಯಾಗುತ್ತದೆ ಎಂದು ಹೇಳುವ ಮೂಲಕ ಸರ್ಕಾರದ ಯೋಜನೆಗಳನ್ನು ಈ ಮಹಾಸಭೆಯ ಉದ್ದೇಶವನ್ನು ವಿವರಿಸಿದರು.
ಉಪನ್ಯಾಸಕರಾದ ಪ್ರದೀಪ್ ನಾಗಠಾಣ ಮಾತನಾಡುತ್ತಾ "ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಅಭ್ಯಾಸ ಅಂದರೆ ಓದುವುದರಿಂದ ಸಾಕಷ್ಟು ಪ್ರಯೋಜನಗಳು ಇವೆ. ಸರ್ಕಾರಿ ಶಾಲೆಯಲ್ಲಿ ಸಿಗುವ ಪ್ರಯೋಜನಗಳನ್ನು ವಿವರಿಸಿದರು, ಪೋಷಕರ ಪರವಾಗಿ ಮಾತನಾಡಿದ ಪಡಗಾನೂರವರು ಸರಕಾರಕ್ಕೆ ಅಭಿನಂದನೆಗಳನ್ನು ತಿಳಿಸುತ್ತಾ ಪಾಲಕರು ತಮ್ಮ ಜವಾಬ್ದಾರಿಯನ್ನು ಅರಿತು ಅವರಿಗೆ ಸಂಸ್ಕಾರಯುತ ಬದುಕು ಕಟ್ಟಿಕೊಳ್ಳಲು ಮಾದರಿಯಾಗಬೇಕು ಎಂದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಎನ್ ಎಸ್ ತೆಗ್ಗಿಹಳ್ಳಿ, ಪ್ರಾಚಾರ್ಯರು ಮಾತನಾಡುತ್ತಾ, ಮಕ್ಕಳು ಸರ್ಕಾರಿ ಸೌಲಭ್ಯಗಳನ್ನು ಪಡೆದು ಸುಭದ್ರ ಬದುಕು ಕೊಟ್ಟಿಕೊಳ್ಳಲು ಪ್ರಯತ್ನ ಪಡಬೇಕು, ಸಾಕಷ್ಟು ಅವಕಾಶಗಳು ಇದ್ದಾವೆ ಅವುಗಳನ್ನು ಪಡೆಯಬೇಕಾದರೆ ಶಿಕ್ಷಣ ಅಗತ್ಯವಾಗಿ ಬೇಕಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಡಿ ಎಸ್ ಹಡಪದ ಉಪನ್ಯಾಸಕರು ನಿರೂಪಿಸಿದರು, ಕಾಲೇಜಿನ ಹಿರಿಯ ಉಪನ್ಯಾಸಕರಾದ ಆರ್ ಡಿ ಬಿರಾದಾರ್ ಹಾಗೂ ಬಿ. ಡಿ ಭೂಸನೂರ ಉಪನ್ಯಾಸಕರು ಸೇರಿದಂತೆ ಆದರ್ಶ ವಿದ್ಯಾಲಯದ ಹಾಗೂ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಎಲ್ಲಾ ಉಪನ್ಯಾಸಕರು , ಉಪನ್ಯಾಸಕಿಯರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.