LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬ್ಯೂಟಿಫುಲ್‌ ಹಿರೋಯಿನ್ ಈಗ ಪವರ್ ಪುಲ್ IPS ಅಧಿಕಾರಿ

ಬಾಲಿವುಡ್ ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿಯೋರ್ವರು ನಟನೆಗೆ ಬ್ರೇಕ್ ಕೊಟ್ಟು ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಐಪಿಎಸ್ ಅಧಿಕಾರಿಯಾಗಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಅವರು ಬೇರ್ಯಾರು ಅಲ್ಲ, ಸಿಮಲಾ ಪ್ರಸಾದ್. ಇವರ ಬಗ್ಗೆ ಹೆಚ್ಚಿನವರಿಗೆ ತಿಳಿಯದೇ ಇರಬಹುದು. ಆದರೆ ಈ ನಟಿ ಬಾಲಿವುಡ್ ಪ್ರೇಕ್ಷಕರಿಗೆ ಚಿರಪರಿಚಿತ.



ನಟಿ ಸಿಮಲಾ ಪ್ರಸಾದ್, ಭೋಪಾಲ್ ನಗರದಲ್ಲಿ 8 ಅಕ್ಟೋಬರ್ 1980 ರಂದು ಜನಿಸಿದರು. ಸಿಮಲಾ ಪ್ರಸಾದ್ ತಂದೆ ಡಾ. ಭಗೀರಥ ಪ್ರಸಾದ್ ಐಎಎಸ್ ಅಧಿಕಾರಿ. ಅವರ ಹಾದಿಯನ್ನೇ ಅನುಸರಿಸಿ ಐಪಿಎಸ್ ಸಿಮಲಾ ಪ್ರಸಾದ್ ಅಧಿಕಾರಿಯಾದರು. ಈಕೆಯ ಸೌಂದರ್ಯಕ್ಕೆ ಬಾಲಿವುಡ್ ಫಿದಾ ಆಗಿತ್ತು. ಈ ನಟಿ ತನ್ನ ಸೌಂದರ್ಯದಿಂದ ಚಿತ್ರರಂಗವನ್ನು ಸೆಳೆಯುತ್ತಿದ್ದರು.

ಬಿ. ಕಾಂ ಓದುತ್ತಿರುವಾಗಲೇ ಹಲವು ನಾಟಕಗಳಲ್ಲಿ ನಟಿಸಿದ್ದರು. 2017 ರಲ್ಲಿ ‘ಅಲಿಫ್’ ಮತ್ತು 2019 ರಲ್ಲಿ ಬಿಡುಗಡೆಯಾದ ‘ನಕಾಶ್’ ನಲ್ಲಿ ಸಿಮಲಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.

ಬಹುಶಃ ಇದಾದ ನಂತರ ಸಿಮಲಾಗೆ ಇನ್ನಷ್ಟು ಒಳ್ಳೆ ಸಿನಿಮಾಗಳು ಸಿಗುತ್ತಿದ್ದವು. ಆದರೆ ಆಕೆಗೆ ರಾಜಕೀಯ ಮತ್ತು ಸಮಾಜಶಾಸ್ತ್ರದಲ್ಲಿ ಆಸಕ್ತಿ ಇತ್ತು. ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ, ಮೊದಲ ಪ್ರಯತ್ನದಲ್ಲಿ ಪಿಎಸ್‌ಸಿಯಲ್ಲಿ ಪಾಸ್ ಆದರು. ಅಲ್ಲದೇ ಡಿಎಸ್ಪಿ ಹುದ್ದೆಯೂ ಸಿಕ್ಕಿತು. ಆದರೆ ಆಕೆಯ ಪಯಣ ಅಲ್ಲಿಗೇ ನಿಲ್ಲಲಿಲ್ಲ. ಐಪಿಎಸ್ ಗುರಿಯತ್ತ ಸಾಗಿತು. ಯಾವುದೇ ಕೋಚಿಂಗ್ ಇಲ್ಲದೆ UPSC ಪರೀಕ್ಷೆಯಲ್ಲಿ ತೇರ್ಗಡೆಯಾದಳು. ನಟಿಯಿಂದ IPS ಅಧಿಕಾರಿಯಾಗಿ ಸಿಮ್ಲಾ ಅವರ ಪಯಾಣವು ನಿಜವಾಗಿಯೂ ಸ್ಫೂರ್ತಿದಾಯಕವಾಗಿದೆ ಮತ್ತು ಪ್ರಶಂಸನೀಯವಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪುನೀತ್ ಕೆರೆಹಳ್ಳಿ ವಿರುದ್ಧ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು'ಬ್ಯಾಕ್ ಟು ಊರು ಪರಿಕಲ್ಪನೆಗೆ, ಅಭಿವೃದ್ಧಿ-ಹೂಡಿಕೆಗಳಿಗೆ ಈ ಮನ್ನಣೆ ಪ್ರಬಲ ದಿಕ್ಸೂಚಿ' - ಸಂಸದ ಕ್ಯಾ. ಚೌಟದೇಶದ ಅತ್ಯಂತ ಕಿರಿಯ ಐಎಎಸ್ ಅಧಿಕಾರಿ ಆಸ್ತಾ ಸಿಂಗ್ ಯಶಸ್ಸಿನ ಕಥನಬಾಲಿವುಡ್ ನಟಿ ಹುಮಾ ಖುರೇಷಿ ಅವರ ಸೋದರಸಂಬಂಧಿ ಹತ್ಯೆ.!ಕರ್ನಾಟಕ PGCET ಪರೀಕ್ಷೆ ಫಲಿತಾಂಶ ಪ್ರಕಟ.!ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ.!ಉಪ್ಪಿನಿಂದ ಅದೃಷ್ಟ, ಆರೋಗ್ಯ, ಐಶ್ವರ್ಯ ಮತ್ತು ಲಕ್ಷ್ಮಿ ಕೃಪಾಕಟಾಕ್ಷ ! ಹಿಂದೂ ಧರ್ಮದಲ್ಲಿ ಉಪ್ಪಿಗಿದೆ ವಿಶೇಷ ಸ್ಥಾನಎಸ್ಸಿಪಿ. ಟಿಎಸ್ಪಿ. ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ವಿರೋಧಿಸಿ ಪ್ರತಿಭಟನೆ.!08-08-2025 ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ- .!ವಚನ: -ಗುಪ್ತ ಮಂಚಣ್ಣ .!