LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಆಸ್ಪತ್ರೆ ಡ್ಯೂಟಿ ಮಧ್ಯೆಯೂ UPSCಗೆ ತಯಾರಿ ನಡೆಸಿ ಐಎಎಸ್ ಅಧಿಕಾರಿಯಾದ ಅಂಜಲಿ ಗರ್ಗ್ ಕಥೆ

ಚಂಡೀಗಢ :ಸರ್ಕಾರಿ ಆಸ್ಪತ್ರೆಯಲ್ಲಿ ಅಭ್ಯಾಸ ಮಾಡುತ್ತಲೇ UPSC ಪರೀಕ್ಷೆಗೆ ತಯಾರಾಗಿ ಐಎಎಸ್ ಅಧಿಕಾರಿಯಾದ. ಡಾ. ಅಂಜಲಿ ಗರ್ಗ್ ಅವರ ಯಶೋಗಾಥೆ.

ಎಂಬಿಬಿಎಸ್ ಓದುವುದು ಭಾರತದ ಅತ್ಯಂತ ಕಷ್ಟಕರವಾದ ಕೋರ್ಸ್ಗಳಲ್ಲಿ ಒಂದಾಗಿದೆ. ಇದಕ್ಕಾಗಿ ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ನೀಟ್ ನಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. NEET ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಎಂಬಿಬಿಎಸ್ ಮಾಡಿ, ವೈದ್ಯೆಯಾಗಿ, ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಅಭ್ಯಾಸ ಮಾಡಿ UPSC ಪರೀಕ್ಷೆಗೆ ತಯಾರಾಗಿ ಐಎಎಸ್ ಅಧಿಕಾರಿಯಾದವರು ಡಾ. ಅಂಜಲಿ ಗರ್ಗ್.

ಅಂಜಲಿ ಗರ್ಗ್ ಚಂಡೀಗಢದ ನಿವಾಸಿ . ಅವರು 1996ರ ಸೆಪ್ಟೆಂಬರ್ 14 ರಂದು ಜನಿಸಿದರು. ವ್ಯಾಪಾರ ಕುಟುಂಬಕ್ಕೆ ಸೇರಿದ ಅವರು ಇಡೀ ಕುಟುಂಬದಲ್ಲಿ ಯಾರೂ ನಾಗರಿಕ ಸೇವೆಯಲ್ಲಿಲ್ಲ. ಡಾ. ಅಂಜಲಿ ಗರ್ಗ್ ಮೊದಲು ವೈದ್ಯೆಯಾಗುವ ಕನಸನ್ನು ನನಸು ಮಾಡಿಕೊಂಡರು. ನಂತರ ಅದಕ್ಕಿಂತ ಒಂದು ಹೆಜ್ಜೆ ಎತ್ತರಕ್ಕೆ ಏರುವ ಕನಸನ್ನು ಕಂಡಿದ್ದ ಅವರು ತನ್ನ ಪರಿಶ್ರಮದ ನೆರವಿನಿಂದ ಅದನ್ನು ನನಸಾಗಿಸಿಕೊಂಡಿದ್ದಾಳೆ. ಡಾ. ಅಂಜಲಿ ಗಾರ್ಗ್ ಚಂಡೀಗಢದಲ್ಲಿರುವ ಶಾಲೆಯಿಂದ 10 ಮತ್ತು 12 ನೇ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ. 10ನೇ ಬೋರ್ಡ್ ಪರೀಕ್ಷೆಯಲ್ಲಿ 10 ಸಿಜಿಪಿಎ ಪಡೆದಿದ್ದರು. 12 ನೇ ಪರೀಕ್ಷೆಯಲ್ಲಿ ಶೇ.96 ಅಂಕ ಪಡೆದಿದ್ದಾರೆ. ನಂತರ ಅವರು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ದೆಹಲಿಯಲ್ಲಿರುವ ವಿಎಂಎಂಸಿ ಮತ್ತು ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದರು.

ವೈದ್ಯರಾದ ನಂತರ ಅವರು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು ಮತ್ತು ಅದರಲ್ಲಿಯೂ ಯಶಸ್ಸನ್ನು ಗಳಿಸಿದರು. ಬುಡಕಟ್ಟು ಹಿನ್ನೆಲೆಯಿಂದ ಬಂದ ಅಂಜಲಿ ಗರ್ಗ್ ಗೆ ಇದೆಲ್ಲವೂ ತುಂಬಾ ಕಷ್ಟಕರವಾಗಿತ್ತು. ಅಂಜಲಿ ಗರ್ಗ್ ಯುಪಿಎಸ್ಸಿ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ವಿಫಲರಾಗಿದ್ದರು. ಎರಡನೇ ಪ್ರಯತ್ನದಲ್ಲಿ 79ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದರು. 2022 ರ UPSC ಪರೀಕ್ಷೆಯಲ್ಲಿ 134 ಅಂಕಗಳನ್ನು ಗಳಿಸಿದರು. ವೈದ್ಯಕೀಯ ವಿಜ್ಞಾನವನ್ನು ಐಚ್ಛಿಕ ವಿಷಯವಾಗಿ ಇಟ್ಟುಕೊಂಡಿದ್ದರು. ಅವರು UPSC CSE 2022 ರಲ್ಲಿ ವೈದ್ಯಕೀಯ ವಿಜ್ಞಾನದ ಟಾಪರ್ ಆಗಿದ್ದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026