ಇಂದಿನ ವಚನ:- -ವೀರಸಂಗಯ್ಯ ಅವರ ವಚನ..!
ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಒಬ್ಬರ ಕಂಡು ಒಬ್ಬರು ಸಾಹಿತ್ಯವಾದರೇನಯ್ಯ ? ಸನ್ನಹಿತರಲ್ಲ.
ಮಬ್ಬುಗಾವಳ ಗವಿದಂತೆ
ಮೋರೆಗೆ ಮೋರೆ ತಾಕು ತಾಕು
ಇಬ್ಬರ ವಿಶ್ವಾಸ ಇಕ್ಕುರೋಗವಾಯಿತ್ತು .
ನಿಬ್ಬಣದ ಮನೆಯಲ್ಲಿ ನೀ ಕದ್ದೆ ತಾ ಕದ್ದೆಯೆಂದು
ಕೊಂಡಾಡಿದಂತೆ,
ಕಬ್ಬ ಕಡಿದು ಗಾಣವಂ ಆಡಿಸಿ
ಕಾವಲಿಯೊಳು ಸುಟ್ಟರೆ ಸಿಹಿ ಬಿಟ್ಟೀತೆ ?
ಹುಬ್ಬ ಹಾಕುತ ಹಿರೆ ಒಡೆಯರಿಗಿದಿರಾಗಿ ಒಡೆಯರು
ಕಬ್ಬು ಕಟ್ಟಿಗೆಗೆ ಆ ಗುಣವಿತ್ತು ಗುರುಶಿಷ್ಯರಿಗೆಯಿಲ್ಲ
ತುಬ್ಬನಿಕ್ಕಿ ತೆಗೆದಾರು ಇಬ್ಬರ ಕಳಂಕವ
ಇನ್ನೊಬ್ಬನೆ ಗುರು ಕಾಣಾಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
-ವೀರಸಂಗಯ್ಯ
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.