LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ತುರುವನೂರು ಜಾತ್ರೆ : ಮೌಢ್ಯಾಚರಣೆಗಳಿಗೆ ತಡೆ

 

ಚಿತ್ರದುರ್ಗ: ಈ ಬಾರಿಯ ತುರುವನೂರು ಮಾರಿ ಜಾತ್ರೆಯಲ್ಲಿ ಬೆತ್ತೆಲ ಸೇವೆ, ಅಸ್ಪೃಶ್ಯತೆ ಆಚರಣೆ, ಒತ್ತಾಯಪೂರ್ವಕವಾಗಿ ದಲಿತ ಸಮುದಾಯದಿಂದ ದಷ್ಟ ಆಚರಣೆ ಮಾಡಿಸುವುದಕ್ಕೆ ತಡೆ ಒಡ್ಡಲಾಗಿದೆ ಎಂದು ಚಿತ್ರದುರ್ಗ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆ ನಿರೀಕ್ಷಕರಾದ ಜಯಪ್ಪ ನಾಯಕ ಬಿ.ಎಲ್. ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜ.6 ರಿಂದ ಪ್ರಾರಂಭವಾದ ತುರವನೂರು ಮಾರಿ ಜಾತ್ರೆಯು ಜ.8 ವರೆಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಜ.2 ರಂದು ಚಿತ್ರದುರ್ಗ ತಾಲ್ಲೂಕು ತಹಶೀಲ್ದಾರ್ ಗೋವಿಂದರಾಜು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಸಭೆ ನಡೆಸಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗಿದೆ.

ಮಾರಿ ಜಾತ್ರೆಯಲ್ಲಿ ದಲಿತ ಸಮುದಾಯದಿಂದ ದುಷ್ಟಪದ್ದತಿಗಳಾದ ಬೆತ್ತಲೆಸೇವೆ, ಪ್ರಾಣಿಬಲಿ, ಪ್ರತಿ ಬೀದಿಗಳಲ್ಲಿ ಸರಗ ಚಲ್ಲಲು ಒತ್ತಾಯಿಸಿರುವ ಕುರಿತು ದೂರುಗಳು ಕೇಳಿ ಬಂದಿದ್ದವು. ಕರ್ನಾಟಕ ಸಾಮಾಜಿಕ ಮೌಢ್ಯ ನಿಷೇಧ ಕಾಯ್ದೆ-2025 ಪ್ರಕಾರ ಬೆತ್ತಲೆ ಸೇವೆ, ಮಡೆಸ್ನಾನ, ಮಾಟಮಂತ್ರ, ಬರಬಳಿ, ಬೆತ್ತಲೆಸೇವೆ, ಮೈಲಿಗೆ ನೆಪದಲ್ಲಿ ಬಹಿಷ್ಕಾರ ಮಾಡುವುದು ಅಪರಾಧಗಳಾಗಿವೆ. ಗ್ರಾಮಸ್ಥರು ಈ ಅನಿಷ್ಠ ಪದ್ದತಿಗಳನ್ನು ಬಿಟ್ಟು ಸೌಹಾರ್ಧಯುತವಾಗಿ ಜಾತ್ರಾ ಮಹೋತ್ಸವ ನಡೆಸಬೇಕು. ಕಾನೂನು ಬಾಹಿರವಾಗಿ ಸಾಮಾಜಿಕ ಅನಿಷ್ಠ ಪದ್ದತಿಗಳನ್ನು ನಡೆಸುವಂತೆ ತಳ ಸಮುದಾಯದವರಿಗೆ ಒತ್ತಾಯಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ನಿರೀಕ್ಷಕ ಜಯಪ್ಪ ನಾಯಕ.ಬಿ.ಎಲ್ ತಿಳಿಸಿದ್ದಾರೆ.

3 ದಿನ ಪೊಲೀಸ್ ಕಣ್ಗಾವಲು:

ತುರುವನೂರು ಜಾತ್ರೆಯ ನಡೆಯುವ 3 ದಿನಗಳು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆ ವತಿಯಿಂದ ಕಣ್ಗಾವಲು ಇರಿಸಲಾಗಿದೆ. ಪೊಲೀಸ್ ಅಧಿಕಾರಿ ಹಾಗೂ ಪೊಲೀಸ್ ಕಾನ್ಸೇಟಬಲ್‌ಗಳು ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಯಾವುದೇ ಮೌಢ್ಯಾಚರಣೆಗಳು ನಡೆಯದಂತೆ ತಡೆ ಒಡ್ಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026