Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬೆಳಗಾವಿಯ ಕಾಕತಿ ಅರಣ್ಯ ಸಿಬ್ಬಂದಿಗಳಿಂದ ಇಬ್ಬರು ಕಾಡುಗಳ್ಳರ ಬಂಧನ..!

ಕಾಕತಿ ಅರಣ್ಯ ಸಿಬ್ಬಂದಿಗಳಿಂದ ಇಬ್ಬರು ಕಾಡುಗಳ್ಳರ ಬಂಧನ..!

ಮಧ್ಯರಾತ್ರಿ ಮರ ಕಡಿದು ಲಕ್ಷಾಂತರ ರೂ ಮಾಲಿನೊಂದಿಗೆ ಸಿಕ್ಕಿಬಿದ್ದ ರಾಜಕಟ್ಟಿ, ಬೆನಕೋಳಿ ಕಳ್ಳರು..!

ಬೆಳಗಾವಿ: ಕಾಕತಿ ವಲಯದ ಭೂತರಾಮನಹಟ್ಟಿ ಅರಣ್ಯದಲ್ಲಿ ತಡರಾತ್ರಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ನೀಲಗಿರಿ ಮರಗಳನ್ನು ಕಡಿಯುತ್ತಿದ್ದ ಇಬ್ಬರು ಕಿರಾತಕರನ್ನು ಕಾಕತಿ ಅರಣ್ಯ ಅಧಿಕಾರಿಗಳು ಬಲೆ ಬಿಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಕತಿ ಅರಣ್ಯ ವಲಯದ Beat Forester ರಾಹುಲ್ ಬೋಂಗಾಳೆ, ಶಂಕರ ಮನವಾಡಿ, ಚಾಮರಾಜ ಮುರುಗೋಡ, ರವಿ ಕಿಲಾರಿ ಸಿಬ್ಬಂದಿಗಳು ಸೇರಿಕೊಂಡು ನಡೆಸಿದ್ದ ಕಾರ್ಯಾಚರಣೆಯಲ್ಲಿ ರಾಜನಕಟ್ಟಿ ಗ್ರಾಮದ ಯಲ್ಲಪ್ಪಾ ಚಂದ್ರಪ್ಪಾ ಡುಮ್ಮನಾಯಕ ಹಾಗೂ ಬೆನಕನಹೊಳೆ ಗ್ರಾಮದ ಮಲ್ಲೇಶ ಮೇಖಲಿ ಎಂಬುವರು ನಿಲಗಿರಿ ಮರಗಳನ್ನು ಕಡಿದು TATA 407 ವಾಹನ ಸಂಖ್ಯೆ Ka22 B1533 ಯಲ್ಲಿ ಸಾಗಿಸುವಾಗ ನಿಲಗಿರಿ ಮಾಲಿನ ಸಮೇತ ವಾಹನವನ್ನು ಜಪ್ತಿ ಮಾಡಿಕೊಂಡಿದ್ದಾರೆ.

ನಂತರ ಕರ್ನಾಟಕ ಅರಣ್ಯ ಕಾಯ್ದೆ 1963 ಹಾಗೂ ಕರ್ನಾಟಕ ಅರಣ್ಯ ನಿಯಮಗಳು 1969 ರ ಪ್ರಕಾರ ಕಾಕತಿ ವಲಯದ ಅರಣ್ಯ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿ ಬೆನಕನಹೊಳೆ ಗ್ರಾಮದಲ್ಲಿ ದಾಸ್ತಾನು ಮಾಡಿದ ನಿಲಗಿರಿ ಮಾಲನ್ನು ಸಹ ಜಪ್ತಿ ಪಡಿಸಿಕೊಳ್ಳಲಾಗಿದೆ.

ವಾಹನ ಸೇರಿ ಸುಮಾರು 4 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ದಾಳಿಯಲ್ಲಿ ಬೆಳಗಾವಿಯ ACF ನಾಗರಾಜ ಬಾಳೆಹೊಸೂರು, RFO ಶಿವಕುಮಾರ ಮಾಳಿ, DRFO ಆನಂದ ಜಯಗೌಡರ, Beat Forester ರಾಹುಲ್ ಬೋಂಗಾಳೆ, ಶಂಕರ ಮನವಾಡಿ, ಚಾಮರಾಜ ಮುರುಗೋಡ, ರವಿ ಕಿಲಾರಿ, ಮಂಜುನಾಥ ಓಸಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಇವರ ಕಾರ್ಯಾಚರಣೆಗೆ DFO ಏನ್ ಎ ಕ್ರಾಂತಿ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.

ಇತ್ತೀಚಿಗೆ ನೀಲಗಿರಿ ಮರಗಳಿಗೆ ಬೇಡಿಕೆ ಅತಿ ಹೆಚ್ಚಾಗಿದ್ದು, ಖಾಸಗಿ ಜಮೀನಿನಲ್ಲಿ ನೀಲಗಿರಿ ಮರಗಳು ಇಲ್ಲದ ಕಾರಣ ಕಿರಾತಕರು ಅರಣ್ಯ ಪ್ರದೇಶದಲ್ಲಿ ಬೆಳೆದಿರುವ ಮರಗಳನ್ನು ಸಹ ಕದ್ದು ಮಾರುವ ಪ್ರವೃತ್ತಿಗೆ ಮುಂದಾಗಿದ್ದಾರೆ. ಈ ಕಾಡು ಕಳ್ಳ ಕಿರಾತಕರಿಗೆ ಕೆಲ ಯೂಟ್ಯೂಬರ್ಸ್ ಹಾಗೂ ಮರಿ ಪುಡಾರಿ ರಾಜಕಾರಣಿಗಳು ಬೆಂಬಲವಾಗಿ ನಿಂತಿದ್ದಾರೆಂದು ತಿಳಿದುಬಂದಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ