LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ: ದಿನೇಶ ಗುಂಡೂರಾವ್.!

 

ಚಿತ್ರದುರ್ಗ: ಸ್ಥಳೀಯ ಗೊಂದಲ ಸ್ಥಳೀಯವಾಗಿ ಇತ್ಯರ್ಥಕ್ಕೆ ಖರ್ಗೆಯವರ ಸೂಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅನವಶ್ಯಕ ಗೊಂದಲ ಪಕ್ಷ ಕಾರ್ಯಕರ್ತರಿಗೆ ಒಳ್ಳೆಯದಲ್ಲ.ಯಾರೇ ನಮ್ಮ ನಾಯಕರು ಆಗಿರಬಹುದು.ಖರ್ಗೆ ಸಾಹೇಬರು ಹೇಳಿದಂತೆ ನಡೆದುಕೊಳ್ಳಬೇಕು. ನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ. ಒಂದು ವಿಷಯದ ಬಗ್ಗೆ ಮಾತ್ರ ಅನಗತ್ಯ ಚರ್ಚೆ ಆಗುತ್ತಿದೆ..ನಾವು ಯಾರೂ ಸಹ ಹೇಳಿಕೆ ಕೊಡುವ ಅಗತ್ಯ ಇಲ್ಲ. ಮುಂದೆ ಹೈಕಮಾಂಡ್ ತೀರ್ಮಾನ ಇದ್ದೇ ಇರುತ್ತದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಸಚಿವರು, ಮಾಧ್ಯಮ ಪ್ರತಿಕ್ರಿಯೆ ವೇಳೆ ಶಾಸಕರು ಹೇಳಿದ್ದಾರೆ. ಯಾರೂ ಸಹ ಪತ್ರಿಕಾಗೋಷ್ಠಿ ಕರೆದು ಏನೂ ಹೇಳಿಲ್ಲ.ಸ್ನೇಹಿತರಿದ್ದವರು ಡಿನ್ನರ್ ಪಾರ್ಟಿಗೆ ಸೇರುತ್ತೇವೆ ಸಹಜ. ನಾನುಬೆಳಗಾವಿಯಲ್ಲಿಡಿನ್ನರ್ಕರೆದಿದ್ದೆನು. 50-60 ಶಾಸಕರು ಡಿನ್ನರ್ ಪಾರ್ಟಿಯಲ್ಲಿದ್ದರು.

ಕೇಂದ್ರ ಸರ್ಕಾರ ಘೋಷಿಸಿದ ಯೋಜನೆಗೂ ಸ್ಪಂದಿಸಿಲ್ಲ.ಭದ್ರಾ ಮೇಲ್ದಂಡೆ ಯೋಜನೆಗೂ ಕೇಂದ್ರ ಹಣ ನೀಡಿಲ್ಲ.ಹೆಚ್. ಡಿ ಕುಮಾರಸ್ವಾಮಿಗೆ ಸುಮ್ಮನೆ ಸಚಿವರಾಗಿ ಮಾಡಿ ಕೂಡಿಸಿದ್ದಾರೆ ಅಷ್ಟೇ.ಹೆಚ್.ಡಿ ಕುಮಾರ ಸ್ವಾಮಿಯವರಿಗೆ ಅಮಿತ್ ಶಾ, ಮೋದಿ ಮುಂದೆ ಮಾತಾಡುವ ಧೈರ್ಯ ಇಲ್ಲ.ಅವರು ಇಲ್ಲ ಅಂದ ಬಳಿಕ ಮುಗೀತು. ಯಾಕೆಂದರೆ ಅವರೇ ಸರ್ವಾಧಿಕಾರಿ.ಮೋದಿ ಜತೆ ಇವರು ಜಗಳ.ಫೈಟ್ ಮಾಡೋಕೆ ಆಗಲ್ಲ.ಬಿಜೆಪಿ ಸಂಸದರು, ಕೇಂದ್ರ ಸಚಿವರು ಪ್ರಯೋಜನೆ ಇಲ್ಲದಂತವರು.ಕೇಂದ್ರಕ್ಕೆ ಕರ್ನಾಟಕದ ಬಗ್ಗೆ ತಾತ್ಸಾರ ಮನೋಭಾವ ಇದೆ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಎಲ್ಲರೂ ರಬ್ಬರ್ ಸ್ಟಾಂಪ್ಗಳು ಎಂದರು.

ಮಹಾರಾಷ್ಟ್ರದಿಂದ ಬೆಳಗಾವಿ ಡಿಸಿಗೆ ಬೆದರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಮಹಾರಾಷ್ಟ್ರದಲ್ಲಿ ರಾಜಕಾರಣಕ್ಕಾಗಿ ಈ ರೀತಿ ಮಾಡುತ್ತಾರೆ. ಬೆಳಗಾವಿ ಜಿಲ್ಲೆ ಎಂದಿಗೂ ನಮ್ಮದೆ. ಮಂಗಳೂರಲ್ಲಿ ವೈದ್ಯಾಧಿಕಾರಿಗಳು ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರೂ ರಾಜೀನಾಮೆ ಕೊಟ್ಟಿಲ್ಲ. ಒಬ್ಬರು ರಾಜೀನಾಮೆ ಬಗ್ಗೆ ಪತ್ರಿಕೆಯಲ್ಲಿ ನೋಡಿದೆ.. ಈ ಬಗ್ಗೆ ಪರಿಶೀಲಿಸುತ್ತೇನೆ. ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.

 

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026