LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫ್ರಿಜ್ ರಿಪೇರಿ ಮಾಡದ ವಿಲ್ರ್ಪೂಲ್ ಇಂಡಿಯಾ (Whirlpool India) ಕಂಪನಿಗೆ ದಂಡ ವಿಧಿಸಿ ಮತ್ತು ಪರಿಹಾರಕ್ಕೆ ಆದೇಶ





ಧಾರವಾಡ ಜು.18: ಕಲಘಟಗಿಯ ಭೋವಿ ಓಣಿಯ ನಿವಾಸಿ ಸೂರಜ್ ಬಾಳಿಕಾಯಿ ಎನ್ನುವವರು ಎದುರುದಾರರ ಹುಬ್ಬಳ್ಳಿಯ ಡೀಲರ್ ಆದ ಪೈ ಇಂಟರ್ ನ್ಯಾಶ್ನಲ್ ಇಲೆಕ್ಟ್ರಾನಿಕ್ಸ ಇವರಲ್ಲಿ ಫ್ರಿಜ್ನ್ನು 2018 ರಲ್ಲಿ ಖರೀದಿಸಿದ್ದರು. ಅದು 10 ವರ್ಷದ ವಾರಂಟಿ ಮತ್ತು ಕಾಂಪ್ರೆಸರ್ ಮೇಲೆ 9 ವರ್ಷದ ವಾರಂಟಿಯನ್ನು ಹೊಂದಿತ್ತು. 2024 ರಲ್ಲಿ ದೂರುದಾರರ ಫ್ರಿಜ್ ತಂಪಾಗದೇ ಸರಿಯಾಗಿ ಕೆಲಸ ಮಾಡುತ್ತಿಲ್ಲದ ಕಾರಣ ದೂರುದಾರರು ಹಲವು ಬಾರಿ ಎದುರುದಾರರಿಗೆ ವಿನಂತಿಸಿದರೂ ಎದುರುದಾರರು ಫ್ರಿಜ್ ದುರಸ್ತಿಯ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಎದುರುದಾರರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣ ಕಾಯಿದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ದ ಕ್ರಮ ಕೈಗೊಳ್ಳಲು ಕೋರಿ ದೂರುದಾರರು ದಿ: 25/11/2024 ರಂದು ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ಎದುರುದಾರರಿಂದ ರೂ.25,400 ಹಣಕೊಟ್ಟು ಫ್ರಿಜ್ ಖರೀದಿಸಿದ್ದಾರೆ. ಅದರ ಮೇಲೆ 9 ಹಾಗೂ 10 ವರ್ಷಗಳ ವಾರಂಟಿ ಇದೆ. ವಾರಂಟಿಯ ಅವದಿಯಲ್ಲಿಯೇ ಆ ಫ್ರಿಜ್ನಲ್ಲಿ ದೋಷ ಕಂಡುಬಂದಿದೆ. ಅದರ ಕಾಂಪ್ರೆಶರ್ ಹಾಳಾಗಿದೆ ಅಂತಾ ಗೊತ್ತಾಗಿದೆ. ಆ ಕಾಂಪ್ರೆಶರ್ ಮೇಲೆ 9 ವರ್ಷದ ವಾರಂಟಿ ಇದ್ದರೂ ಎದುರುದಾರರು ಆ ಬಿಡಿ ಭಾಗ ತಮ್ಮ ಕಂಪನಿಯಲ್ಲಿ ಲಭ್ಯವಿಲ್ಲ ಕಾರಣ ಫ್ರಿಜನ್ನು ದುರಸ್ತಿ ಮಾಡಲಾಗುವುದಿಲ್ಲ ಅನ್ನುತ್ತಿದ್ದಾರೆ. ವಾರಂಟಿ ಅವದಿ ಮುಗಿಯುವರಗೆ ಆ ಫ್ರಿಜ್ನಎಲ್ಲ ಬಿಡಿ ಭಾಗಗಳನ್ನು ಕಾಯ್ದಿಟ್ಟುಕೊಳ್ಳುವ ಹೊಣೆಗಾರಿಕೆ ಮತ್ತು ಜವಬ್ದಾರಿ ಆ ಫ್ರಿಜ್ ತಯಾರಿಸಿದ ಎದುರುದಾರರ ಮೇಲೆ ಇದೆ. ಆದರೆ ಎದುರುದಾರರು ತಮ್ಮ ಹೊಣೆಗಾರಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅಂತಹ ಎದುರುದಾರರ ನಡಾವಳಿಕೆ ಗ್ರಾಹಕ ರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿನಿಯ ಪಟ್ಟು ತೀರ್ಪು ನೀಡಿದೆ. ತೀರ್ಪು ನಿಡಿದ ಒಂದು ತಿಂಗಳೊಳಗಾಗಿ ಫ್ರಿಜ್ನ ಸದ್ಯದ ಮೌಲ್ಯ ರೂ.12,700 ಮತ್ತು ಅದರ ಮೇಲೆ ಶೇ.8 ಬಡ್ಡಿ ಹಾಕಿ ದೂರುದಾರರಿಗೆ ಸಂದಾಯ ಮಾಡುವಂತೆ ಎದುರುದಾರ ವರ್ಲ್ ಪೂಲ್ ಇಂಡಿಯಾ ಕಂಪನಿಗೆ ಆಯೋಗ ನಿರ್ದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ರೂ.25,000 ಪರಿಹಾರ ಮತ್ತು ರೂ.5,000 ಪ್ರಕರಣದ ಖರ್ಚು ವೆಚ್ಚಕೊಡುವಂತೆ ಆಯೋಗ ಎದುರುದಾರರಿಗೆ ಸೂಚಿಸಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು