ಕ್ಷಿಪಣಿ ಹಾರಿಸಿ ಇರಾನ್ 'ದೊಡ್ಡ ತಪ್ಪು' ಮಾಡಿದೆ, ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ: ಇಸ್ರೇಲ್ ಪ್ರಧಾನಿ ಎಚ್ಚರಿಕೆ
"ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಮಾಡುವ ಮೂಲಕ ಇರಾನ್ ಅತಿದೊಡ್ಡ ಪ್ರಮಾದ ಎಸಗಿದೆ. ಇದಕ್ಕಾಗಿ ಇರಾನ್ ತಕ್ಕ ಬೆಲೆ ತೆರಬೇಕಾಗುತ್ತದೆ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ. ಇರಾನ್ ಮಂಗಳವಾರ ಇಸ್ರೇಲ್ ಕಡೆಗೆ 400 ಕ್ಷಿಪಣಿಗಳನ್ನು ಉಡಾಯಿಸಿದ್ದರಿಂದ ಲಕ್ಷಾಂತರ ಇಸ್ರೇಲಿಗಳು ಪ್ರಸ್ತುತ ಬಾಂಬ್ ಆಶ್ರಯದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ದೇಶದಾದ್ಯಂತ ಸೈರನ್ ಮೊಳಗಿದ್ದು, ತುರ್ತು ಕ್ರಮ ಕೈಗೊಳ್ಳಲಾಗಿದೆ. ಇಸ್ರೇಲಿ ರಕ್ಷಣಾ ಪಡೆಗಳು (IDF) ದೇಶಾದ್ಯಂತದ ನಿವಾಸಿಗಳಿಗೆ ಸಂರಕ್ಷಿತ ಸ್ಥಳಗಳಲ್ಲಿರಲು ಸೂಚಿಸಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಿಡಿಕಾರಿದ್ದಾರೆ. ಜೆರುಸಲೇಲ್ನಲ್ಲಿ ಭದ್ರತಾ ಕ್ಯಾಬಿನೆಟ್ ಸಭೆಯ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಇರಾನ್ ಮಾಡಿದ ತಪ್ಪಿಗಾಗಿ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ. ಇಸ್ರೇಲ್ ವಿರುದ್ಧ ದಾಳಿ ನಡೆಸಿದ ನಂತರ, ಇರಾನ್ ಅಧಿಕೃತ ಹೇಳಿಕೆಯಲ್ಲಿ, “ಇಸ್ಮಾಯಿಲ್ ಹನಿಯೆಹ್, ಸಯ್ಯದ್ ಹಸನ್ ನಸ್ರಲ್ಲಾ ಮತ್ತು ಹುತಾತ್ಮ ನಿಲ್ಫೊರೂಶನ್ ಅವರ ಹುತಾತ್ಮತೆಗೆ ಪ್ರತಿಕ್ರಿಯೆಯಾಗಿ, ನಾವು ಆಕ್ರಮಿತ ಪ್ರದೇಶಗಳ ಹೃದಯವನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ತಿಳಿಸಿದೆ. ಇಸ್ರೇಲ್ ಮೇಲೆ ಇರಾನ್ನ ದಾಳಿಯು “ಭಯೋತ್ಪಾದಕ ಕೃತ್ಯಗಳಿಗೆ ಕಾನೂನು, ತರ್ಕಬದ್ಧ ಮತ್ತು ಕಾನೂನುಬದ್ಧ ಪ್ರತಿಕ್ರಿಯೆಯಾಗಿದೆ” ಎಂದು ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಗೆ ಇರಾನ್ನ ಮಿಷನ್ ತಿಳಿಸಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.