LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸೈಬರ್ ಭದ್ರತೆಗೆ ಧಕ್ಕೆ ಒದಗಿಸುವ ದೇಶಗಳ ಪಟ್ಟಿಗೆ ಭಾರತವನ್ನ ಸೇರಿಸಿದ ಕೆನಡಾ..!

ಟೊರಾಂಟೋ: ಭಾರತ ಮತ್ತು ಕೆನಡಾ ನಡುವಿನ ಭಿನ್ನಾಭಿಪ್ರಾಯ ಮತ್ತೊಂದು ಹಂತಕ್ಕೆ ತಲುಪಿದೆ. ಇದೀಗ ಕೆನಡಾದ ಸೈಬರ್ ಭದ್ರತೆಗೆ ಧಕ್ಕೆ ಒದಗಿಸುವ ದೇಶಗಳ ಪಟ್ಟಿಗೆ ಭಾರತವನ್ನು ಸೇರಿಸಿದೆ.

ಸೈಬರ್ ಭದ್ರತೆಗೆ ಧಕ್ಕೆ ಒದಗಿಸುವ ದೇಶಗಳ ಪಟ್ಟಿಗೆ ಉತ್ತರಕೊರಿಯಾ, ಇರಾನ್, ಚೀನಾ, ರಷ್ಯಾ ದೇಶಗಳ ಜೊತೆಗೆ ಕೆನಡಾವು ಭಾರತವನ್ನು ಸೇರಿಸಿದೆ. ಕೆನಡಾದ ಸೈಬರ್ ಸೆಕ್ಯೂರಿಟಿ ಸೆಂಟರ್‌ನ ವಾರ್ಷಿಕ ವರದಿಯೊಂದರಲ್ಲಿ ಈ ಪಟ್ಟಿ ನೀಡಲಾಗಿದ್ದು ಇದರಲ್ಲಿ ಭಾರತದ ಹೆಸರು ಮೊದಲ ಬಾರಿಗೆ ನಮೂದಿಸಿರುವುದು ತಿಳಿದುಬಂದಿದೆ. ಈ ವರದಿಯು 2025-26ರ ವರ್ಷದಲ್ಲಿ ಯಾವ್ಯಾವ ದೇಶಗಳು ಕೆನಡಾ ಭದ್ರತೆಗೆ ಅಪಾಯ ತರಬಹುದು ಎಂಬುದನ್ನು ತಿಳಿಸಿದೆ.

ಬೇಹುಗಾರಿಕೆ ಉದ್ದೇಶದಲ್ಲಿ ಭಾರತದ ಸರ್ಕಾರಿ ಪ್ರಾಯೋಜಿತವಾಗಿ ಕೆನಡಾ ಸರ್ಕಾರದ ಜಾಲಗಳ ವಿರುದ್ಧ ಸೈಬರ್ ಅಪಾಯ ಎದುರಾಗಬಹುದು ಎಂಬುದು ತಮ್ಮ ಅಂದಾಜು. ಕೆನಡಾ ಮತ್ತು ಭಾರತದ ನಡುವೆ ಇರುವ ಅಧಿಕೃತ ದ್ವಿಪಕ್ಷೀಯ ಸಂಬಂಧವು ಈ ಸೈಬರ್ ಅಪಾಯಕಾರಿ ಚಟುವಟಿಕೆಯನ್ನು ಹೆಚ್ಚಿಸಬಹುದು ಎಂದೂ ಈ ವರದಿ ಎಚ್ಚರಿಕೆ ನೀಡಿದೆ.

ಜಾಗತಿಕ ವ್ಯವಸ್ಥೆಯೊಳಗೆ ಹೊಸ ಪವರ್ ಸೆಂಟರ್‌ಗಳಾಗಲು ಬಯಸುವ ಭಾರತದಂತಹ ದೇಶಗಳು ಕೆನಡಾಗೆ ವಿವಿಧ ಸ್ತರಗಳಲ್ಲಿ ಅಪಾಯ ತರಬಲ್ಲ ಸೈಬರ್ ಯೋಜನೆಗಳನ್ನು ನಿರ್ಮಿಸುತ್ತಿವೆ ಎಂದು ವರದಿ ಹೇಳಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೂರುದಾರ, ದೂರುದಾರನ ಹಿಂದಿರುವ ವ್ಯಕ್ತಿಗಳ ಕುರಿತು ಸಮಗ್ರ ತನಿಖೆಗೆ ವಿಜಯೇಂದ್ರ ಆಗ್ರಹಸದನದಲ್ಲೂ ‌ಸುದ್ದಿಯಾದ ಧರ್ಮಸ್ಥಳ ಪ್ರಕರಣ: ಗೃಹ ಸಚಿವರು ಹೇಳಿದ್ದೇನು ಗೊತ್ತಾ?'ಧರ್ಮಸ್ಥಳದಲ್ಲಿ ಶವ ಶೋಧ ತಾತ್ಕಾಲಿಕ ಸ್ಥಗಿತ'- ಪರಮೇಶ್ವರ್'ವಿಧಾನ ಮಂಡಲದ ಅಧಿವೇಶನ ಮುಗಿದ ಬಳಿಕ ಅನರ್ಹ ಬಿಪಿಎಲ್ ಕಾರ್ಡ್ ಪರಿಷ್ಕರಣೆ'- ಮುನಿಯಪ್ಪಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಸಣ್ಣ ತಪ್ಪುಗಳಿಗೆ ಜೈಲು ಶಿಕ್ಷೆ ವಿಧಿಸುವಂತಿಲ್ಲ, ತಿದ್ದುಪಡಿಗೆ ಮುಂದಾದ ಕೇಂದ್ರ ಸರ್ಕಾರ!!540 ಅರಣ್ಯ ರಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಗತಿ: ಈಶ್ವರ ಖಂಡ್ರೆ.!ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಗೃಹ ಸಚಿವ ಪರಮೇಶ್ವರ್ ಸೂಚನೆಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿ ಪ್ರಕರಣ: ಗೃಹ ಸಚಿವ ಪರಮೇಶ್ವರ್ ಹೇಳಿದ್ದು.?ಭಾರೀ ಮಳೆ ಹಿನ್ನೆಲೆ ಶಿರಾಡಿ ಘಾಟ್‌ನ ಹಲವೆಡೆ ಗುಡ್ಡ ಕುಸಿತ: ರಸ್ತೆಗೆ ಕುಸಿದ ಮಣ್ಣು, ಬೃಹತ್ ಬಂಡೆ