ಹೊಸದುರ್ಗ: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ವಯೋನಿವೃತ್ತಿ, ಇತರೆ ಕಾರಣಗಳಿಂದ ತೆರವಾಗಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 30 ರಿಂದ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅಂಗನವಾಡಿ ಕಾರ್ಯಕರ್ತೆಯರನ್ನು ಆಯ್ಕೆ ಮಾಡಬೇಕಾದ ಅಂಗನವಾಡಿಕೇAದ್ರಗಳ ಹೆಸರು: ಹೊಸದುರ್ಗ ತಾಲ್ಲೂಕಿನ ಅಗಸರಹಳ್ಳಿ, ಮೆಟ್ಟಿನಹೊಳೆ, ಅಲರಹಳ್ಳಿ, ಅಜ್ಜಿಕಂಸಾಗರ, ಇಟ್ಟಿಗೆಹಳ್ಳಿ, ಬುಕ್ಕಸಾಗರ, ಅಹಮದ್ ನಗರ, ಚಿಕ್ಕಯಗಟಿ, ಕಂಗುವಳ್ಳಿ-1, ಡಿ.ಕೆ.ಕಟ್ಟೆ, ಕಾಡುಸಿದ್ದರಹಟ್ಟಿ, ಬೀಸನಹಳ್ಳಿ, ಸೋಮಸಂದ್ರ, ಕಬ್ಬಳ-1, ಕಾನುಬೇನಹಳ್ಳಿ, ಮಲ್ಲಿಹಳ್ಳಿ, ಶ್ರೀರಾಂಪುರ-3,ತುAಬಿನಕೆರೆ, ಹಳೆಕಡಿವಾಣಕಟ್ಟೆ ( ಮಿನಿ ಅಂಗನವಾಡಿ ಕೇಂದ್ರ), ವಿದ್ಯಾನಗರ-1 ಅಂಗನವಾಡಿ ಕೇಂದ್ರಗಳಿಗೆ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆಅರ್ಜಿ ಸಲ್ಲಿಸಬಹುದು.
ಅಂಗನವಾಡಿ ಸಹಾಯಕಿಯರನ್ನು ಆಯ್ಕೆಮಾಡಬೇಕಾದ ಅಂಗನವಾಡಿ ಕೇಂದ್ರಗಳ ಹೆಸರು: ಹೊಸದುರ್ಗ ತಾಲ್ಲೂಕಿನ ಸಿದ್ದರಾಮನಗರ, ವಿದ್ಯಾನಗರ, 2ನೇ ಯಲಕಪ್ಪನಹಟ್ಟಿ, ಕೆರೆಕೋಡಿಹಟ್ಟಿ, ರಂಗವ್ವನಹಳ್ಳಿ ಲಂ.ಹಟ್ಟಿ, ಹೊನ್ನೇಕೆರೆ, ಜಾನಕಲ್ ಲಂ.ಹಟ್ಟಿ, ಶಾಂತಿನಗರ-1, ಕೃಷ್ಣಾಪುರ, ಹೊತ್ತರಗೊಂಡನಹಳ್ಳಿ, ಮಾರಬಘಟ್ಟ, ಆದ್ರಿಕಟ್ಟೆ, ಹುಲ್ಲುಕಟ್ಟೆ, ಸಿದ್ದಗೊಂಡನಹಳ್ಳಿ, ಬಳ್ಳೆಕೆರೆ, ಸೊಡರನಾಳ್, ಜಂಗಮನಗರ, ಕೆಲ್ಲೋಡು-2, ಸೋಮಸಂದ್ರ, ಬೆನಕನಹಳ್ಳಿ,ಬೆಲಗೂರು, ಜಯಸುವರ್ಣಾಪುರ ಹಾಗೂ ಜೆ.ಎನ್.ಕೆರೆ -2 ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್ಸೈಟ್ https://karnemakaone.kar.nic.in/abcd/ ನ್ನು ಸಂಪರ್ಕಿಸಬಹುದು ಎಂದು ಹೊಸದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.