K2kannadanews.in
Crime News ರಾಯಚೂರು : ಮರ್ಚೇಡದ ಕ್ರಾಸ್ ಬಳಿ ಕಾರು ಚಾಲಕನ ನಿರ್ಲಕ್ಷದ ಚಾಲನೆಯಿಂದ ಕಾರು ಮತ್ತು ಆಟೋ ನಡುವೆ ಅಪಘಾತ ಜರಗೆ ಆರು ಜನರಿಗೆ ಗಾಯಗಳಾಗಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
https://youtu.be/wWkJCdy05hE?si=bmqmr1qL5LSWuDaf
ರಾಯಚೂರ ತಾಲೂಕಿನ ಮರ್ಚೆಡ್ ಗ್ರಾಮದ ಕ್ರಾಸ್ ಬಳಿ ಈ ಒಂದು ಅಪಘಾತ ಜರುಗಿದೆ. ಅಪಘಾತದಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಓರ್ವ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದು, ಕೋಮಾ ಸ್ಥಿತಿಗೆ ಹೋಗಿದ್ದ ಗಾಯಾಳು ಮಧುಸೂದನ್ ಎಂದು ತಿಳಿದು ಬಂದಿದ್ದು, ಬೀರಲಿಂಗಪ್ಪ ಎಂಬುವವರ ಕಾಲು ಮುರಿದು ಹೋಗಿದ್ದು ಇವರನ್ನು ಬಳ್ಳಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.
ನಾಗಮ್ಮ, ಬಸಮ್ಮ, ಉಮಾದೇವಿ, ಸುರೇಶ್ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಮರ್ಚಡ್ ಗ್ರಾಮದಿಂದ ರಾಯಚೂರಿಗೆ ಬರುತ್ತಿದ್ದ ಆಟೋಗೆ ಹೊಸಪೇಟೆಯಿಂದ ರಾಯಚೂರು ಕಡೆಗೆ ಅತೀವೇಗದಲ್ಲಿದ್ದ ಕಾರು ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಬವಿಸಿದೆ. ಗಾಯಾಳುಗಳು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
https://www.youtube.com/live/yccUk3Bhywg?si=lBuOvF-whPxxlrdh