K2kannadanews.in
Electric shook ಸಿರವಾರ : 50 ಮೆಗಾವ್ಯಾಟ ಸೋಲಾರ್ ಪವರ್ ಪ್ಲಾಂಟ್ ನಲ್ಲಿ ವಿದ್ಯುತ್ ಕೇಬಲ್ ಸ್ಪರ್ಶಿಸಿ ಯುವಕ ಮೃತಪಟ್ಟ ಘಟನೆ ಇತ್ತೀಚೆಗೆ ಮಾಚನೂರು ಗ್ರಾಮದಲ್ಲಿ ಜರುಗಿದೆ.
https://youtu.be/9WGF4KjRLFQ?si=qsaMpx7rvp_kyoKy
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಾಚನೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಒಂದು ಘಟನೆ ಜರುಗಿದೆ. ಮೃತ ಯುವಕ ತಾಲೂಕಿನ ಅತ್ತನೂರು ಗ್ರಾಮದ ಅಜ್ಮೀರ್(೧೯ ) ಎಂದು ತಿಳಿದುಬಂದಿದೆ. ಮಾಚನೂರು ಗ್ರಾಮದ ಹೊರವಲಯದಲ್ಲಿನ ೫೦ ಮೆಗಾ ವ್ಯಾಟ್ ಸೋಲಾರ್ ಪವರ್ಪ್ಲಾಂಟ್ನಲ್ಲಿ ವಾರದ ಹಿಂದೆ ಕೆಲಸಕ್ಕೆ ಸೇರಿದ್ದ ಅಜ್ಮೀರ್, ಎಂದಿನಂತೆ ಕೆಲಸಕ್ಕೆ ಹೋಗಿದ್ದ ವೇಳೆ ಘಟನೆ ಜರುಗಿದೆ.
https://youtube.com/shorts/JdD8Sqn5q70?si=BjBgh9sTZ8NRaajG
ಪವರ್ ಪ್ಲಾಂಟ್ ನಲ್ಲಿ ಕೆಲಸಕ್ಕೆ ಹೋಗಿದ್ದ ಯುವಕನಿಗೆ ಯಾವುದೇ ಸೇಪ್ಟಿ ಉಪಕರಣಗಳು ನೀಡಿರಲಿಲ್ಲ. ಹಾಗಾಗಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಘಟನೆ ಜರುಗಿದೆ ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ. ಘಟನೆ ಸಂಬಂಧ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.