LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS : ಉತ್ತರ ಪ್ರದೇಶದಲ್ಲಿ ಭೀಕರ ಗಾಳಿಮಳೆ : 111 ಮಂದಿ ಸಾವು

ಉತ್ತರ ಪ್ರದೇಶ : ಕಳೆದ ಎರಡು ದಿನಗಳಿಂದ ಉತ್ತರ ಪ್ರದೇಶದಲ್ಲಿ ಬೀಸುತ್ತಿರುವ ಭೀಕರ ಗಾಳಿ ಮತ್ತು ಮಳೆಗೆ ರಾಜ್ಯಾದ್ಯಂತ ಬರೋಬ್ಬರಿ 111 ಜನರು ಬಲಿಯಾಗಿದ್ದಾರೆ. ಈ ನೈಸರ್ಗಿಕ ವಿಕೋಪದಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ಮೃತರ ಸಂಖ್ಯೆ 111ಕ್ಕೆ ಏರಿಕೆಯಾಗಿದ್ದು, 75ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಲ್ಲದೆ, 150ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ.ಸಂಭಲ್ ಮತ್ತು ಉನ್ನಾವೋ ಸೇರಿದಂತೆ ಒಟ್ಟು 19 ಜಿಲ್ಲೆಗಳಲ್ಲಿ ಚಂಡಮಾರುತದಂತಹ ಗಾಳಿ ತೀವ್ರ ಹಾನಿ ಉಂಟುಮಾಡಿದೆ.ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದಾಗಿ ಹಲವು ಭಾಗಗಳಲ್ಲಿ ಸಂಚಾರ ಮತ್ತು ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಅನೇಕ ಮನೆಗಳ ಗೋಡೆಗಳು ಮತ್ತು ಮೇಲ್ಛಾವಣಿಗಳು ಕುಸಿದಿವೆ.

ಮುಖ್ಯಮಂತ್ರಿಗಳ ಸೂಚನೆ

ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಿಲ್ಲಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಪ್ರತಿ ಮೂರು ಗಂಟೆಗೊಮ್ಮೆ ಹಾನಿಯ ವರದಿ ನೀಡುವಂತೆ ಮತ್ತು ಬಾಧಿತ ಕುಟುಂಬಗಳಿಗೆ ತಕ್ಷಣವೇ ಪರಿಹಾರ ನಿಧಿಯನ್ನು ವಿತರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಪವಾಡ ಸದೃಶವಾಗಿ ಬದುಕುಳಿದ ಇ-ರಿಕ್ಷಾಚಾಲಕ!

ಈ ಭೀಕರ ಚಂಡಮಾರುತದ ನಡುವೆ ಬರೇಲಿಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಬರೇಲಿಯ ಬಾಮಿಯಾನ್ ನಿವಾಸಿ, 50 ವರ್ಷದ ನನ್ಹೆ ಎಂಬ ಇ-ರಿಕ್ಷಾ ಚಾಲಕ ಗಾಳಿಯ ಹೊಡೆತಕ್ಕೆ ಸಿಲುಕಿ ಬರೋಬ್ಬರಿ 50 ಅಡಿ ಎತ್ತರಕ್ಕೆ ಹಾರಿದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಡೆದಿದ್ದೇನು ?

ನಿನ್ನೆ ಅವರು ಮದುವೆ ಸಮಾರಂಭವೊಂದಕ್ಕೆ ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ಬಿರುಗಾಳಿ ಆರಂಭವಾಗಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಅವರು ರಸ್ತೆಯ ಪಕ್ಕದಲ್ಲಿದ್ದ ಟಿನ್ ಶೆಡ್ ಅಡಿಯಲ್ಲಿ ನಿಂತಿದ್ದರು. ಶೆಡ್ ಗಾಳಿಗೆ ಹಾರಿಹೋಗದಂತೆ ಅವರು ಅದನ್ನು ಕಟ್ಟಿದ್ದ ಹಗ್ಗವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಆದರೆ ಗಾಳಿಯ ವೇಗ ಎಷ್ಟಿತ್ತೆಂದರೆ, ಇಡೀ ಟಿನ್ ಶೆಡ್‌ನೊಂದಿಗೆ ನನ್ಹೆ ಅವರೂ ಸಹ 50 ಅಡಿ ಎತ್ತರಕ್ಕೆ ಹಾರಿದ್ದಾರೆ! ಕೆಲವು ಕ್ಷಣಗಳ ನಂತರ ಅವರು ಸಮೀಪದ ಹೊಲವೊಂದರಲ್ಲಿ ಬಿದ್ದಿದ್ದಾರೆ. ಅದೃಷ್ಟವಶಾತ್ ಅವರು ಬದುಕುಳಿದಿದ್ದು, ಎರಡು ಕಡೆ ಮೂಳೆ ಮುರಿತದ (Fracture) ಗಾಯಗಳಾಗಿವೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನ ಇದನ್ನು “ದೈವ ಪವಾಡ” ಎಂದು ಕರೆಯುತ್ತಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING: ಸುಲಿಗೆ-ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೋಲ್ಕತ್ತಾ ಡಿಸಿಪಿ ಶಾಂತನು ಸಿನ್ಹಾ ಬಿಸ್ವಾಸ್ ಅರೆಸ್ಟ್BIG BREAKING: ವಾಹನ ಸವಾರರಿಗೆ ಬೆಲೆ ಏರಿಕೆ ಶಾಕ್: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ತಲಾ 3 ರೂ. ಏರಿಕೆ | Petrol, diesel prices hikedಬೆಳಗ್ಗೆ ಎಷ್ಟು ಗಂಟೆಗೆ ನಿದ್ರೆಯಿಂದ ಎದ್ದೇಳಬೇಕು..? 99% ಜನರಿಗೆ ಸರಿಯಾದ ಸಮಯವೇ ತಿಳಿದಿಲ್ಲ!BIG NEWS : ಸರ್ಕಾರಿ ನೌಕರರಿಗೆ ವಾರಕ್ಕೆ 2 ದಿನ ಆಫೀಸ್ ರಜೆ ? ಮನೆಯಿಂದಲೇ ಕೆಲಸ ಮಾಡಲು ಆದೇಶ !ALERT : ಅತಿಯಾದ್ರೆ ಅಮೃತವೂ ವಿಷ: ಏಕಕಾಲಕ್ಕೆ 5ಕ್ಕೂ ಹೆಚ್ಚು ಮಾತ್ರೆ ಸೇವನೆ ಪ್ರಾಣಕ್ಕೆ ಕಂಟಕ – ತಜ್ಞರ ಎಚ್ಚರಿಕೆಹಣದಿಂದ ಹಣ ಗಳಿಸುವ ಅದ್ಭುತ ಐಡಿಯಾ.. ಇಂದೇ ಆರಂಭಿಸಿ! ಸೀಕ್ರೆಟ್ ಟಿಪ್ಸ್..ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ CNG ದರವೂ ಹೆಚ್ಚಳBIG BREAKING: ನೀಟ್ ಯುಜಿ ಪರೀಕ್ಷೆಯ ಹೊಸ ದಿನಾಂಕ ಘೋಷಣೆ: ಜೂನ್ 21 ರಂದು ಮರು ಪರೀಕ್ಷೆಗೆ ಅಧಿಸೂಚನೆ ಪ್ರಕಟ | NEET-UG ExamBIG NEWS : ಉತ್ತರ ಪ್ರದೇಶದಲ್ಲಿ ಭೀಕರ ಗಾಳಿಮಳೆ : 111 ಮಂದಿ ಸಾವುBIG NEWS: ಹಾವು ಕಚ್ಚಿ ದುರಂತ: ಕಾಂಗ್ರೆಸ್ ಮುಖಂಡ ಕೇತನ್ ಭಾಟಿಕರ್ ದುರ್ಮರಣ