LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಕಂಚಿನ ಪ್ರತಿಮೆ ಕಳ್ಳತನ

ವಾಷಿಂಗ್ಟನ್ : ಡೊನಾಲ್ಡ್ ಟ್ರಂಪ್ ಪತ್ನಿ, ಅಮೇರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರ ಹುಟ್ಟೂರು ಸ್ಲೊವೇನಿಯಾದ ಸೆವ್ನಿಕಾದಲ್ಲಿದ್ದ ಅವರ ಕಂಚಿನ ಪ್ರತಿಮೆ ಕಣ್ಮರೆಯಾಗಿದೆ. ಈ ಶಿಲ್ಪವನ್ನು 2020 ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಅನಾವರಣಗೊಳಿಸಿದ್ದರು.

ಪ್ರತಿಮೆಯನ್ನು ಕಣಕಾಲುಗಳ ಬಳಿ ಕತ್ತರಿಸಿ ಮಂಗಳವಾರ ಅಪರಿಚಿತ ವ್ಯಕ್ತಿಗಳು ಹೊತ್ತೊಯ್ದಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಮತ್ತು ಆರೋಪಿಗಳನ್ನು ಪತ್ತೆಹಚ್ಚುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಪೂರ್ವ ಸ್ಲೊವೇನಿಯಾದ ಕೆಲವು ನಿವಾಸಿಗಳು ಇದನ್ನು ಧ್ವಂಸಗೊಳಿಸಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ಹಣಕ್ಕಾಗಿ ಅದನ್ನು ಹೊತ್ತೊಯ್ದಿದ್ದಾರೆ ಎಂದು ಹೇಳಲಾಗಿದೆ.

ಈ ಕಂಚಿನ ಪ್ರತಿಮೆಯು 2020 ರಲ್ಲಿ ಬೆಂಕಿಗೆ ಆಹುತಿಯಾದ ಮರದ ಪ್ರತಿಮೆಯ ಬದಲಿಯಾಗಿದೆ. ಅಲೆಕ್ಸ್ ಮ್ಯಾಕ್ಸಿ ಜುಪೆವ್ಕ್ ಮರದ ರಚನೆಯನ್ನು ರಚಿಸಿದ್ದು, ಇದು 2017 ರ ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಪದಗ್ರಹಣ ಸಮಾರಂಭದಲ್ಲಿ ಅವರು ಧರಿಸಿದ್ದಂತಹ ಮಸುಕಾದ ನೀಲಿ ಬಣ್ಣದ ಉಡುಪನ್ನು ಧರಿಸಿರುವುದನ್ನು ಹೋಲುತ್ತಿತ್ತು. ಪ್ರತಿಮೆಯ ಶಿಲ್ಪಿ ಬ್ರಾಡ್ ಡೌನಿ, ಅದರ ಕಳ್ಳತನದ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2028ರ ಚುನಾವಣೆಯಲ್ಲಿ ಗೆದ್ದು ನಾನೇ  ಮುಖ್ಯ ಮಂತ್ರಿ.!ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾಗೆ ಕೋರ್ಟ್ ಬಿಗ್ ಶಾಕ್..!ಪರೀಕ್ಷೆ ಒತ್ತಡದಿಂದ ಬರೆಯಬೇಡಿ ಹಬ್ಬದಂತೆ ಆಚರಿಸಿ -ತಾ.ಪಂ ಇಒ ವೈ.ರವಿಕುಮಾರ್ಸನ್ಮಾನಗಳು, ಪ್ರಶಂಸೆಗಳು ಕೇವಲ ಅದರ ಸಾಂಕೇತಿಕ ರೂಪ ಮಾತ್ರ ರವಿ ಕೆ.ಅಂಬೇಕರ್.!ದೃಷ್ಠಿಹೀನರಾಗಿದ್ದರೂ, ಐಎಎಸ್ ನಲ್ಲಿ 20ನೇ ಸ್ಥಾನ ಪಡೆದ ರವಿ ರಾಜ್ ಯಶಸ್ವಿ ಕಥನ.!ಈ ಕಾರಣಕ್ಕೆ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹ್ಯತೆ .!ಶುಕ್ರ-ಶನಿಯ ಮೀನ ಸಂಚಾರದಿಂದ ಮಾಲವ್ಯ ಯೋಗ: ಈ 5 ರಾಶಿಯವರ ಜೀವನದಲ್ಲಿ ಬಹುದೊಡ್ಡ ಬದಲಾವಣೆ!ಹೆಣ್ಣು ಅಬಲೆಯಲ್ಲಿ ಸಬಲೆ:ಮಾಜಿ ಸಚಿವ ಆಂಜನೇಯಹೋರಾಟದಲ್ಲಿ ಅಸ್ವಸ್ಥಗೊಂಡ ರೈತ ಶೀಘ್ರ ಗುಣಮುಖವಾಗಲಿ ದೇವಿಗೆ ಪೂಜೆ: ನಿರ್ಲಕ್ಷ್ಯ ವಹಿಸಿರುವ ಡಿಸಿ ವರ್ಗಾವಣೆಗೆ ಆಗ್ರಹ.!ಇಂದಿನ ವಚನ: -ಮನಸಂದ ಮಾರಿತಂದೆ