LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು ಈ 5 ಆಹಾರ ಸೇವಿಸಿ

ಕಳೆದ ಒಂದು ತಿಂಗಳಿಂದ ಚಳಿ ವಿಪರೀತ ಹೆಚ್ಚಾಗಿದೆ. ಈ ಸಮಯದಲ್ಲಿ ಶೀತ, ಕೆಮ್ಮು, ಉಸಿರಾಟದ ತೊಂದರೆ, ಕಾಲು ನೋವು, ಗಂಟು ನೋವು ಹೀಗೆ ನಾನಾ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ, ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗಿರಿಸಿಕೊಳ್ಳಬೇಕಾದುದು ಬಹಳ ಅಗತ್ಯ. ಚಳಿಗಾಲದಲ್ಲಿ ದೇಹದ ಚರ್ಮವು ಬಹಳ ಶುಷ್ಕವಾಗಿರುತ್ತದೆ. ದೇಹವನ್ನು ನೈಸರ್ಗಿಕವಾಗಿ ಬೆಚ್ಚಗಿರಿಸಿಕೊಳ್ಳಲು ಮನೆಯೊಳಗೇ ಅತ್ಯುತ್ತಮವಾದ ಪರಿಹಾರವಿದೆ. ಚಳಿಗಾಲದ ಋತುವಿನಲ್ಲಿ ನೀವು ಬೆಚ್ಚಗಿರಲು ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡುವ ಕೆಲವು ಆಯುರ್ವೇದ ಆಹಾರಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ.

1. ಅರಿಶಿನ:ಅರಿಶಿನವು ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಮೂಲಿಕೆಯಾಗಿದೆ. ದೇಹದಲ್ಲಿ ಗಾಯವಾದಾಗ ಅರಿಶಿನದಿಂದ ಚಿಕಿತ್ಸೆ ನೀಡಬಹುದು. ಈ ಅದ್ಭುತ ಮೂಲಿಕೆಯ ಬಳಕೆಯು ದೇಶಾದ್ಯಂತ ಶತಮಾನಗಳಿಂದ ಪ್ರಚಲಿತವಾಗಿದೆ. ಅರಿಶಿನವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಾಗುತ್ತದೆ. ಹೀಗಾಗಿ ಸಾಮಾನ್ಯ ಶೀತಗಳು ಮತ್ತು ಜ್ವರದಿಂದ ನಿಮ್ಮನ್ನು ಅರಿಶಿನ ನಿಮ್ಮನ್ನು ರಕ್ಷಿಸುತ್ತದೆ. ಅರಿಶಿನವು ವಾತ, ಪಿತ್ತ ಮತ್ತು ಕಫ ಎಂಬ ಮೂರು ದೋಷಗಳ ಸಮತೋಲನವನ್ನು ಸುಗಮಗೊಳಿಸುತ್ತದೆ ಮತ್ತು ದೇಹವು ಆರೋಗ್ಯಕರ ಮತ್ತು ಬಲವಾಗಿರಲು ಸಹಾಯ ಮಾಡುತ್ತದೆ.

2. ಬೆಲ್ಲ:ಬೆಲ್ಲ ನಮ್ಮ ಅಡುಗೆಮನೆಯಲ್ಲಿರುವ ಅತ್ಯುತ್ತಮ ಔಷಧೀಯ ಗುಣಗಳಿರುವ ಪದಾರ್ಥವಾಗಿದೆ. ಸಿಹಿ ತಿನ್ನಬೇಕು ಎಂಬ ನಿಮ್ಮ ಆಸೆಯನ್ನು ಆರೋಗ್ಯಕರ ರೀತಿಯಲ್ಲಿ ಪೂರೈಸಲು ಸಕ್ಕರೆಯ ಬದಲು ಬೆಲ್ಲ ಅತ್ಯುತ್ತಮ ಪಾರ್ಥವಾಗಿದೆ. ಆಯುರ್ವೇದದ ಪ್ರಾಚೀನ ಬೋಧನೆಗಳ ಪ್ರಕಾರ, ಬೆಲ್ಲವು ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ನೀಗಿಸುತ್ತದೆ. ಚಳಿಗಾಲದಲ್ಲಿ ವಿಶೇಷವಾಗಿ, ಬೆಲ್ಲವು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಮತ್ತು ಆಲಸ್ಯದ ಭಾವನೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬೆಲ್ಲದ ಸಮೃದ್ಧ ಕಬ್ಬಿಣ ಮತ್ತು ವಿಟಮಿನ್ ಸಿ ಅಂಶವು ಉಸಿರಾಟದ ತೊಂದರೆಗೆ ಅತ್ಯಂತ ಪ್ರಯೋಜನಕಾರಿ. ಗಂಟಲು ನೋವು, ಗಂಟಲು ಕಿರಿಕಿರಿಗೆ ಕೂಡ ಬೆಲ್ಲ ಸಹಾಯಕವಾಗಿದೆ.

3. ಕೇಸರಿ:ಕೇಸರಿ ಎಂಬ ಮೂಲಿಕೆ ಸುಂದರವಾದ ಬಣ್ಣ ಮತ್ತು ಸುಗಂಧಕ್ಕೆ ಹೆಸರುವಾಸಿಯಾಗಿದೆ. ಇದು ವಾಸ್ತವವಾಗಿ ಔಷಧೀಯ ಮೂಲಿಕೆಯಾಗಿದೆ. ಸನ್‌ಶೈನ್ ಮಸಾಲೆಯನ್ನು ಯಾವುದೇ ಶೀತ ಅಥವಾ ವೈರಲ್ ಕಾಯಿಲೆಗಳನ್ನು ನಿವಾರಿಸಲು ಸೇವಿಸಲಾಗುತ್ತದೆ. ಇದನ್ನು ವಿಶೇಷವಾಗಿ ಚಳಿಗಾಲದಲ್ಲಿ ಸೇವಿಸಲಾಗುತ್ತದೆ. ಕೇಸರಿಯು ಉನ್ನತ ಮಟ್ಟದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಅದು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಈ ಆಯುರ್ವೇದ ಮೂಲಿಕೆಯು ಒತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

4. ಅಶ್ವಗಂಧ:ಅಶ್ವಗಂಧವು ಪ್ರಸಿದ್ಧ ಆಯುರ್ವೇದ ಮೂಲಿಕೆಯಾಗಿದೆ. ಅಶ್ವಗಂಧ ಎಲ್ಲಾ ವಯಸ್ಸಿನ ಜನರಲ್ಲಿ ಶಕ್ತಿ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ ಮತ್ತು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಆಯಾಸ ಮತ್ತು ಆಲಸ್ಯದ ಭಾವನೆಗಳನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮನ್ನು ಬೆಚ್ಚಗಿಡುತ್ತದೆ ಮತ್ತು ಸಾಮಾನ್ಯ ಶೀತ ಮತ್ತು ಜ್ವರವನ್ನು ಹಿಡಿಯುವ ಸಾಧ್ಯತೆಗಳನ್ನು ತಡೆಯುತ್ತದೆ. ಅಶ್ವಗಂಧವನ್ನು ಭಾರತೀಯ ಜಿನ್ಸೆಂಗ್ ಎಂದೂ ಕರೆಯಲಾಗುತ್ತದೆ ಮತ್ತು ಇದು ವ್ಯಕ್ತಿಯ ದೇಹ ಮತ್ತು ಮನಸ್ಸಿನ ಮೇಲೆ ಶಾಂತಗೊಳಿಸುವ ಪರಿಣಾಮಕ್ಕಾಗಿ ಉತ್ತಮವಾಗಿ ಗುರುತಿಸಲ್ಪಟ್ಟಿದೆ. ಅಶ್ವಗಂಧವನ್ನು ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಬಳಸಲಾಗುತ್ತದೆ. ಇದು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಇದು ಸಹಕಾರಿ.

5. ತುಪ್ಪ:ತುಪ್ಪವು ಬೆಣ್ಣೆಯ ರೂಪಾಂತರವಾಗಿದ್ದು, ಶುಷ್ಕ ಮತ್ತು ಚಳಿಯ ವಾತಾವರಣದಲ್ಲಿ ನೀವು ಸೇವಿಸಬಹುದಾದ ಅತ್ಯುತ್ತಮ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಏಕೆಂದರೆ ತುಪ್ಪವು ಸಮೃದ್ಧವಾದ ಪೋಷಕಾಂಶಗಳಿಂದ ತುಂಬಿದೆ. ತುಪ್ಪ ನಿಮ್ಮನ್ನು ಒಳಗಿನಿಂದ ಆರ್ದ್ರಗೊಳಿಸುತ್ತದೆ ಮತ್ತು ತೇವಗೊಳಿಸುತ್ತದೆ. ಇದು ಬ್ಯುಟರಿಕ್ ಆಸಿಡ್ ಮತ್ತು ವಿಟಮಿನ್ ಎ ಮತ್ತು ಇಯನ್ನು ಹೊಂದಿದೆ. ತುಪ್ಪವು ನಿಮ್ಮ ದೇಹವನ್ನು ಬೆಚ್ಚಗಿಡಲು ಅನುಕೂಲ ಮಾಡುತ್ತದೆ ಮತ್ತು ಆದ್ದರಿಂದ ನಿಮ್ಮ ಚಳಿಗಾಲದ ಸೇವನೆಗೆ ಇದು ಸೂಕ್ತವಾದ ಸೇರ್ಪಡೆಯಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST