Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಮಾಜಿ ಶಾಸಕ ಲಿಂ. ನಾಗನಗೌಡ ಕಂದಕೂರರ ದ್ವಿತೀಯ ಪುಣ್ಯಸ್ಮರಣೆ

ಕಂದಕೂರಿಗೆ ಸಾಗರೋಪಾದಿಯಲ್ಲಿ ಹರಿದು ಬಂದ ಜನ

ಮಾಜಿ ಶಾಸಕ ಲಿಂ. ನಾಗನಗೌಡ ಕಂದಕೂರರ ದ್ವಿತೀಯ ಪುಣ್ಯಸ್ಮರಣೆ

ಯಾದಗಿರಿ: ಹಿರಿಯ ರಾಜಕೀಯ ಧುರೀಣ, ಗುರಮಠಕಲ್ ಕ್ಷೇತ್ರದ ಮಾಜಿ ಶಾಸಕ ದಿವಂಗತ ಲಿಂ. ನಾಗನಗೌಡ ಕಂದಕೂರ ಅವರ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮವು ಬುಧವಾರ ಗುರಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ ಅವರ ತೋಟದಲ್ಲಿ ಭಕ್ತಿಭಾವ ಹಾಗೂ ಜನಸಾಗರದ ನಡುವೆ ಜರುಗಿತು.

ತೋಟದಲ್ಲಿರುವ ಕಂದಕೂರರ ಸ್ಮಾರಕವನ್ನು ಪುಷ್ಪಗಳಿಂದ ಸಿಂಗಾರಗೊಳಿಸಲಾಗಿತ್ತು. ಬೆಳಿಗ್ಗೆ ಕಂದಕೂರ ಪರಿವಾರದಿಂದ ಸಮಾಧಿಗೆ ಶಾಸ್ತ್ರೋಕ್ತ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ವೇಳೆಗೆ ಯಾದಗಿರಿ ಸೇರಿದಂತೆ ನೆರೆಯ ಕಲಬುರಗಿ, ರಾಯಚೂರು, ಬೀದರ್ ಜಿಲ್ಲೆಗಳು ಹಾಗೂ ಗುರಮಠಕಲ್ ಕ್ಷೇತ್ರದ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ನಾಗನಗೌಡ ಕಂದಕೂರರ ಒಡನಾಡಿಗಳು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಸಾಗರೋಪಾದಿಯಲ್ಲಿ ಆಗಮಿಸಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.

ಜನಸಂದಣಿ ನಿಯಂತ್ರಣಕ್ಕೆ ಸ್ವಯಂಸೇವಕರು ಕೆಲಕಾಲ ಪರದಾಡುವಂತಾಯಿತು. ಅಪಾರ ಸಂಖ್ಯೆಯಲ್ಲಿ ಮಹಿಳೆಯರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಯ ವಿವಿಧ ಮಠಾಧೀಶರು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ ದಿವಂಗತ ನಾಯಕನಿಗೆ ಗೌರವ ಅರ್ಪಿಸಿದರು.

ನಾಗನಗೌಡ ಕಂದಕೂರರು ತಮ್ಮ ಜೀವಿತಾವಧಿಯಲ್ಲಿ ಜನರೊಂದಿಗೆ ಹೊಂದಿದ್ದ ಆಪ್ತತೆ ಮತ್ತು ಪ್ರೀತಿ ಎಷ್ಟರ ಮಟ್ಟಿಗೆ ಆಳವಾಗಿತ್ತು ಎಂಬುದಕ್ಕೆ ಈ ಪುಣ್ಯಸ್ಮರಣೆಗೆ ಸ್ವಯಂ ಪ್ರೇರಣೆಯಿಂದ ಹರಿದು ಬಂದ ಜನರೇ ಸಾಕ್ಷಿಯಾಗಿದರು. ಅಧಿಕಾರದಲ್ಲಿರಲಿ, ಇಲ್ಲದಿರಲಿ ತನ್ನ ಬಳಿ ಬಂದ ಪ್ರತಿಯೊಬ್ಬರನ್ನೂ ಆತ್ಮೀಯವಾಗಿ ಕಂಡು, ಕಪ್ ಚಹಾ ಕುಡಿಸಿಯೇ ಕಳುಹಿಸುತ್ತಿದ್ದ ಅವರ ಸರಳತೆ ಹಾಗೂ ಮಾನವೀಯತೆ ಇಂದಿಗೂ ಗುರಮಠಕಲ್ ಕ್ಷೇತ್ರದ ಜನರ ಮನಸ್ಸಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ ಎಂದು ಅಭಿಮಾನಿಗಳು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಸಿದ್ರಾಮಪ್ಪಗೌಡ ಯಕ್ಷಂತಿ, ಗೌಡಪ್ಪಗೌಡ ಮದರ್ಕಲ್, ಶ್ರೀನಿವಾಸರೆಡ್ಡಿ ಕಂದಕೂರ, ಡಾ. ಅಶೋಕರಡ್ಡಿ ವಡವಟ್, ರಾಜೇಂದ್ರರೆಡ್ಡಿ ಹಂಚಿನಾಳ, ಮಲ್ಲಿಕಾರ್ಜುನರೆಡ್ಡಿ ಕಂದಕೂರ, ಶಾಸಕ ಶರಣಗೌಡ ಕಂದಕೂರ, ಮಹೇಂದ್ರರೆಡ್ಡಿ ಕಂದಕೂರ, ವೆಂಕಟರೆಡ್ಡಿ ಯಕ್ಷಂತಿ, ಸುಜೀವ್ ಪಾಟೀಲ್ ಮಾನ್ವಿ, ರಾಕೇಶರೆಡ್ಡಿ ಯಕ್ಷಂತಿ, ಲಿಂಗಣ್ಣಗೌಡ ಕೊಡಮ್ನಳ್ಳಿ, ಡಾ. ಅಶೋಕರಡ್ಡಿ ಅಮೀನಗಡ ಸೇರಿದಂತೆ ಕಂದಕೂರ ಪರಿವಾರ, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಬಾಳೆ ಎಲೆಯಲ್ಲಿ ಶಿಸ್ತುಬದ್ಧ ಭೋಜನ ವ್ಯವಸ್ಥೆ

ಆತಿಥ್ಯದ ವಿಷಯದಲ್ಲಿ ಮೊದಲಿನಿಂದಲೂ ಹೆಸರು ಪಡೆದಿರುವ ಕಂದಕೂರ ಪರಿವಾರ, ಈ ಪುಣ್ಯಸ್ಮರಣೆಯಲ್ಲಿಯೂ ಅದೇ ಸಂಪ್ರದಾಯವನ್ನು ಮುಂದುವರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುಮಾರು 6 ರಿಂದ 7 ಸಾವಿರ ಜನರಿಗೆ ಟೇಬಲ್ ವ್ಯವಸ್ಥೆಯೊಂದಿಗೆ ಬಾಳೆ ಎಲೆಯಲ್ಲಿ ಭೋಜನ ನೀಡಲಾಯಿತು. ಬಿಸಿಬಿಸಿ ಹೋಳಿಗೆ, ಗುಲಾಬ್ ಜಾಮೂನು, ಮಿರ್ಚಿ ಬಜ್ಜಿ, ಪೂರಿ, ಕೆಂಪು ಚಟ್ನಿ, ಮಸಾಲ ರೈಸ್ ಹಾಗೂ ರೈತಾವನ್ನು ಜನತೆ ಸವಿದರು.

ಮೂರು ಎಕರೆ ಪ್ರದೇಶದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಈ ಎಲ್ಲಾ ವ್ಯವಸ್ಥೆಗಳ ಮೇಲ್ವಿಚಾರಣೆಯನ್ನು ಮಲ್ಲಿಕಾರ್ಜುನರೆಡ್ಡಿ ಕಂದಕೂರ ಹಾಗೂ ಶಾಸಕ ಶರಣಗೌಡ ಕಂದಕೂರ ಖುದ್ದಾಗಿ ಮುಂದೆ ನಿಂತು ನಿಭಾಯಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಗನ ಕೊಲೆಯ ಸೇಡು: ರಣಚಂಡಿಯಾದ ಹೆತ್ತವಳು! ರಕ್ತಕ್ಕೆ ರಕ್ತವೆಂದು 12 ವರ್ಷಗಳ ಬಳಿಕ ಮುಹೂರ್ತ ಇಟ್ಟ ತಾಯಿ!₹281.48 ಕೋಟಿ ಮಲ್ಲಾಬಾದ್ ಏತ ನೀರಾವರಿ ಯೋಜನೆಯಲ್ಲಿ ಅಕ್ರಮ ಆರೋಪ; ಸರ್ಕಾರದ ತನಿಖೆಗೆ ಆಗ್ರಹಫ್ರೀಡಂ ಹಬ್ಬದಲ್ಲಿ ‘ಮೋದಿ ಮೋದಿ’ ಘೋಷಣೆ; ಡಿಕೆಶಿ ಮಾತಿನಲ್ಲೇ ಜನರಿಗೆ ಟಾಂಗ್ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ದಂಡಿನ ಆಯ್ಕೆ ಮಾಡುವಂತೆ ಸಿದ್ದು ತುಮಕೂರು ಆಗ್ರಹನಕಲಿ ಎನ್‌ಕೌಂಟರ್ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ: ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಗೃಹ ಸಚಿವರಿಗೆ ಮನವಿಹಳಿಸಗರ ಸರ್ಕಾರಿ ಶಾಲೆಯ ದುಸ್ಥಿತಿ: ಪುಟಾಣಿಗಳ ಜೀವದೊಂದಿಗೆ ಚೆಲ್ಲಾಟ; ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ತಪ್ಪದುಗೃಹ ಸಚಿವರ ಘೋಷಣೆಗೆ ಸವಾಲೇ? ಶಹಾಪುರದಲ್ಲಿ ಮತ್ತೆ ಜೋರಾದ ಅಕ್ರಮ ಮರಳು ಸಾಗಾಟಒಂದು ವಾರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ: ಇಲ್ಲದಿದ್ದರೆ ಬೃಹತ್ ಪ್ರತಿಭಟನೆ – ಕರ್ನಾಟಕ ಪ್ರಾಂತ ರೈತ ಸಂಘ ಎಚ್ಚರಿಕೆಕೆನಾಲ್ ಒಡೆದು ಸಾವಿರಾರು ಲೀಟರ್ ನೀರು ಪೋಲು: ರೈತರ ಜಮೀನು ಜಲಾವೃತ, ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪದ ಆರೋಪನಾರಾಯಣಪುರ ಬಲದಂಡೆ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ: ತಕ್ಷಣ ನಿರ್ವಹಣೆಗೆ ರೈತ ಸಂಘ ಆಗ್ರಹ