LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
💛

💛 ಸ್ವತಂತ್ರ ಪತ್ರಿಕೋದ್ಯಮ ಬೆಂಬಲಿಸಲು ಲೇಖನದ ಕೆಳಭಾಗದಲ್ಲಿ UPI ಮೂಲಕ ಕಾಣಿಕೆ ನೀಡಿ!

State News

KPSC ಮತ್ತೊಂದು ಕರ್ಮಕಾಂಡ ಬಯಲು: ಇಬ್ಬರು ಸಿಬ್ಬಂದಿ ಅರೆಸ್ಟ್!

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಸುತ್ತಲಿನ ವಿವಾದಗಳ ಸರಣಿಗೆ ಮತ್ತೊಂದು ಬೃಹತ್‌ ಹಗರಣ ಸೇರ್ಪಡೆಯಾಗಿದೆ. ಉದ್ಯೋಗಾಕಾಂಕ್ಷಿಗಳ ಗೌಪ್ಯ ಮಾಹಿತಿಯನ್ನು ಮಧ್ಯವರ್ತಿಗಳಿಗೆ ತಲುಪಿಸುತ್ತಿದ್ದ ಆಯೋಗದ ಇಬ್ಬರು ಸಿಬ್ಬಂದಿಯನ್ನು ವಿಧಾನಸೌಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸಂಸ್ಥೆಯಲ್ಲೇ ತಾಂತ್ರಿಕ ಸಹಾಯಕರಾಗಿದ್ದ ಶರಣಪ್ಪ ಅಡವಳ್ಳಿ ಹಾಗೂ ಹಿರಿಯ ಸಹಾಯಕ ಸ್ವಾಮಿದಾಸ್ ಬಂಧಿತ ನೌಕರರು. ಇದರ ಜೊತೆಗೆ, ಕೆಎಎಸ್ (KAS) ಸಂದರ್ಶನದಲ್ಲಿ ಅಂಕ ನೀಡಲು 1.5 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಎಫ್‌ಐಆರ್ ಕೂಡ ದಾಖಲಾಗಿದೆ.

ಖಾಸಗಿ ವಿವರ ಸೋರಿಕೆ ಮತ್ತು ದಲ್ಲಾಳಿಗಳ ಆಮಿಷ:

ಜಲಸಂಪನ್ಮೂಲ ಇಲಾಖೆಯ ಕಿರಿಯ ಎಂಜಿನಿಯರ್ (JE) ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸಂದರ್ಶನಕ್ಕೆ 1:3 ಅನುಪಾತದಲ್ಲಿ ಅರ್ಹತೆ ಪಡೆದಿದ್ದ ಅಭ್ಯರ್ಥಿಗಳ ಮೊಬೈಲ್ ಸಂಖ್ಯೆ ಸೇರಿದಂತೆ ಪ್ರಮುಖ ದತ್ತಾಂಶವನ್ನು ಈ ನೌಕರರು ಮಧ್ಯವರ್ತಿಗಳಿಗೆ ತಲುಪಿಸಿದ್ದರು. ಈ ಮಾಹಿತಿ ಆಧಾರಿಸಿ ಅಭ್ಯರ್ಥಿಗಳಿಗೆ ಕರೆ ಮಾಡುತ್ತಿದ್ದ ದಲ್ಲಾಳಿಗಳು, ತಾವೇ ಕೆಪಿಎಸ್‌ಸಿ ಅಧಿಕಾರಿಗಳೆಂದು ಬಿಂಬಿಸಿಕೊಂಡು ಲಕ್ಷಾಂತರ ರೂಪಾಯಿ ನೀಡಿ ಉದ್ಯೋಗ ಗಿಟ್ಟಿಸಿಕೊಳ್ಳುವಂತೆ ಆಮಿಷ ಒಡ್ಡುತ್ತಿದ್ದರು. ದಲ್ಲಾಳಿಗಳ ಕರೆಗಳಿಂದ ಸಂಶಯಗೊಂಡ ಅಭ್ಯರ್ಥಿಗಳು, ಅವರೊಂದಿಗಿನ ಸಂಭಾಷಣೆಯ ಆಡಿಯೋ ಹಾಗೂ ವಾಟ್ಸ್‌ಆಪ್ ಸಂದೇಶಗಳನ್ನು ಆಯೋಗಕ್ಕೆ ತಲುಪಿಸಿ ದೂರು ನೀಡಿದ್ದರು.

ಪೊಲೀಸ್ ಕಾರ್ಯಾಚರಣೆ ಮತ್ತು ತನಿಖೆ:

ಪ್ರಕರಣದ ತೀವ್ರತೆ ಅರಿತ ಆಯೋಗದ ಸಹಾಯಕ ಕಾರ್ಯದರ್ಶಿ ಬಿ.ಎನ್. ಶೋಭಾ ಅವರು ನೀಡಿದ ಅಧಿಕೃತ ದೂರಿನ ಮೇರೆಗೆ ವಿಧಾನಸೌಧ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಆರಂಭದಲ್ಲಿ ಮೂವರು ಮಧ್ಯವರ್ತಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕಿಂಗ್‌ಪಿನ್‌ ಸುಳಿವು ಲಭ್ಯವಾಯಿತು. ಆತನನ್ನು ವಿಚಾರಣೆಗೊಳಪಡಿಸಿದಾಗ ಕೆಪಿಎಸ್‌ಸಿ ಆಂತರಿಕ ಸಿಬ್ಬಂದಿಯ ಭಾಗಿಯುವಿಕೆ ಬೆತ್ತಲಾಗಿದೆ. ಸದ್ಯ ಈ ಇಬ್ಬರು ನೌಕರರನ್ನು ಬಂಧಿಸಲಾಗಿದ್ದು, ಜಾಲದಲ್ಲಿರುವ ಇತರರ ಪತ್ತೆಗೆ ಜಾಲ ಬೀಸಲಾಗಿದೆ.

ಕೆಎಎಸ್ 384 ಹುದ್ದೆಗಳ ಸಂದರ್ಶನದಲ್ಲಿ 1.5 ಕೋಟಿ ರೂ. ಬೇಡಿಕೆ:

ಮತ್ತೊಂದೆಡೆ, ಕೆಪಿಎಸ್‌ಸಿ ನಡೆಸಿದ 384 ಕೆಎಎಸ್ ಹುದ್ದೆಗಳ ನೇಮಕಾತಿ ಮತ್ತು ಸಂದರ್ಶನದಲ್ಲೂ ಭಾರೀ ಅಕ್ರಮ ನಡೆದಿದೆ ಎಂಬ ಆಘಾತಕಾರಿ ದೂರು ಕೇಳಿಬಂದಿದೆ. ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಆಧರಿಸಿ ಕಾಂತಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಭ್ಯರ್ಥಿಯೊಬ್ಬರು ಕೆಪಿಎಸ್‌ಸಿ ಸದಸ್ಯೆಯೊಂದಿಗೆ ನೇರ ಸಂಪರ್ಕದಲ್ಲಿದ್ದು, ಸಂದರ್ಶನದಲ್ಲಿ ಜಸ್ಟ್ 25 ಅಂಕಗಳನ್ನು ನೀಡಲು ಬರೋಬ್ಬರಿ 1.5 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆಯಿಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಈ ನಿಟ್ಟಿನಲ್ಲೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಮಾಧ್ಯಮ ಬೆಂಬಲಿಸಿ / Support Local Journalism

ನಿಮ್ಮ ಬೆಂಬಲ ಸ್ವತಂತ್ರ ಪತ್ರಿಕೋದ್ಯಮವನ್ನು ಜೀವಂತವಾಗಿರಿಸುತ್ತದೆ. Scan & Pay directly via PhonePe, GPay or Paytm.

0% Gateway Commission — Money goes 100% directly into publisher bank account.
Scan with Any UPI App
Scan QR Code to Support News via UPI
Pre-filled: ₹10.00
UPI ID: khushihost1@ybl
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
SHOCKING: ಬೆಂಗಳೂರಿನ ಸ್ಟಾರ್‌ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ: ಅವಧಿ ಮೀರಿದ ಹಾಲು, ಮಾಂಸ, ಮೀನು ಪತ್ತೆ!ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ, 40 ದಾಟಿದ ನಂತರ ಕಣ್ಣಿನ ಪರೀಕ್ಷೆ ಮಾಡಿಸಿ: ಸಾಗರದಲ್ಲಿ ASP ಡಾ.ಬೆನಕ ಪ್ರಸಾದ್ ಸಲಹೆBIG NEWS: ಸಾಗರದಲ್ಲಿ 'ನಕಲಿ ನೋಟ್' ಜಾಲ ಸಕ್ರಿಯ: ವ್ಯಾಪಾರಿಗಳು, ಸಾರ್ವಜನಿಕರು ಜಾಗೃತರಾಗಿರಲು 'ಸುಭಾಷ್ ಕೌತಳ್ಳಿ' ಮನವಿಶಾಸಕರ ಅಭಿವೃದ್ಧಿ ಶೂನ್ಯ, ಆಡಳಿತಕ್ಕೆ ಜನರೇ ಉತ್ತರಿಸಲಿದ್ದಾರೆ: ಸಾಗರದಲ್ಲಿ ಬಿಜೆಪಿ ನಾಯಕರು ವಾಗ್ದಾಳಿಸಮಾಜವನ್ನು ಎಚ್ಚರಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು: ಸಾಗರದಲ್ಲಿ ಪೌರಾಯುಕ್ತ ಎಚ್.ಕೆ. ನಾಗಪ್ಪ ಅಭಿಪ್ರಾಯಜೈಸ್ವಾಲ್‌ನನ್ನು ತಂಡದಿಂದ ಹೊರಗೆ ಕಳುಹಿಸಿದ್ದು 4 ಪಂದ್ಯಗಳ ನಿಷೇಧದಿಂದ ರಕ್ಷಿಸಲು: ಅಜಿಂಕ್ಯ ರಹಾನೆ ಸ್ಪೋಟಕ ಹೇಳಿಕೆ!AI ಕ್ರಾಂತಿ: ಭಾರತದಲ್ಲಿ ಉದ್ಯೋಗ ಕಡಿತಕ್ಕಿಂತ ಹೊಸ ನೇಮಕಾತಿಯೇ ಹೆಚ್ಚು! Nomura ವರದಿಕ್ಲೀನ್ ಅಪ್ ಬೆಂಗಳೂರಿಗೆ ಆಂದೋಲನದ ರೂಪ ನೀಡಿದ ಬೆಸ್ಕಾಂ: ಎಂಡಿ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಬಿಡದಿ ಟೌನ್ ಶಿಪ್ ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚನೆBREAKING: ಮೊಜ್ತಬಾ ಖಮೇನೇಯಿ ಆರೋಗ್ಯ ಸ್ಥಿತಿ ಗಂಭೀರ! ಇರಾನ್‌ನಲ್ಲಿ ಸಾವಿನ ವದಂತಿ !