
ಪೂರ್ವ ವಲಯದಲ್ಲಿ ಅಂಚೆ ಕಛೇರಿಗಳಿಗೆ ಬೀಗಮುದ್ರೆ
ಪಾಲಿಕೆಯ ಒಡೆತನದ ಸೆಂಟ್ ಜಾನ್ಸ್ ರಸ್ತೆಯಲ್ಲಿರುವ ಮಳಿಗೆ ಸಂಖ್ಯೆ: 01 ಹಾಗೂ ವಸಂತನಗರ ಮಾರುಕಟ್ಟೆಯ ನೆಲ ಅಂತಸ್ತಿನಲ್ಲಿ ಅಂಚೆ ಕಛೇರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ ಮಳಿಗೆಗಳಿಗೆ ಪಾಲಿಕೆಯ ನಿರ್ಣಯದ ವಿಷಯದ ಸಂಖ್ಯೆ: 18/13-14 ದಿನಾಂಕ:26/02/2014ರ ನಿರ್ಣಯದಂತೆ ಬಾಡಿಗೆಯನ್ನು ಪರಿಷ್ಕರಿಸಲಾಗಿರುತ್ತದೆ.
• ಸೆಂಟ್ ಜಾನ್ಸ್ ರಸ್ತೆಯಲ್ಲಿರುವ ಅಂಚೆ ಕಛೇರಿಯು 1665 ಚದರಡಿಗಳಿದ್ದು, ಸದರಿ ಇಲಾಖೆರವರು ಏಪ್ರಿಲ್-2014ರಿಂದ ಹಳೆಯ ಬಾಡಿಗೆಯನ್ನು ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆಯನ್ನು ಪಾವತಿಸುತ್ತಿರುವುದಿಲ್ಲ. ಈ ಸಂಬಂಧ, ಹಲವಾರು ಬಾರಿ ನೋಟೀಸ್ ಜಾರಿ ಮಾಡಿದ್ದರೂ ಪರಿಷ್ಕರಣೆಯ ಬಾಡಿಗೆ/ಗುತ್ತಿಗೆ ಮೊತ್ತವನ್ನು ಪಾವತಿಸದೇ ಇದ್ದ ಕಾರಣ ಮಾನ್ಯ ವಲಯ ಆಯುಕ್ತರು (ಪೂರ್ವ)ರವರ ಆದೇಶದಂತೆ ದಿನಾಂಕ:26/08/2024 ಬೆಳಗ್ಗೆ 6.00ರ ಸಮಯದಲ್ಲಿ ಸದರಿ ಮಳಿಗೆಗೆ ಬೀಗಮುದ್ರೆ ಹಾಕಲಾಗಿರುತ್ತದೆ.
ಸದರಿ ಮಳಿಗೆಗೆ ಬರಬೇಕಾದ ಬಾಕಿ ಬಾಡಿಗೆ ಮೊತ್ತ ಒಟ್ಟು ರೂ. 88,91,695/-

• ವಸಂತನಗರ ಮಾರುಕಟ್ಟೆಯ ನೆಲ ಅಂತಸ್ತಿನಲ್ಲಿರುವ ಅಂಚೆ ಕಛೇರಿಯು 214 ಚದರಡಿಗಳಿದ್ದು, ಸದರಿ ಇಲಾಖೆಯವರು ಜನವರಿ-2016ರಿಂದ ಜುಲೈ-2024ರವರೆಗೆ ಪರಿಷ್ಕರಣೆಯ ಬಾಡಿಗೆ/ಗುತ್ತಿಗೆ ಮೊತ್ತದ ಬಾಕಿ ಇರುವ ವ್ಯತ್ಯಾಸದ ಮೊತ್ತವನ್ನು ಪಾವತಿಸುತ್ತಿರುವುದಿಲ್ಲ. ಈ ಬಗ್ಗೆ ಹಲವಾರು ಬಾರಿ ನೋಟೀಸ್ ಜಾರಿ ಮಾಡಿ ಪರಿಷ್ಕೃತ ಬಾಡಿಗೆಯನ್ನು ಪಾವತಿಸುವಂತೆ ಸೂಚಿಸಲಾಗಿದ್ದರೂ ಬಾಡಿಗೆಯನ್ನು ಪಾವತಿಸದೇ ಇದ್ದ ಕಾರಣ ಮಾನ್ಯ ವಲಯ ಆಯುಕ್ತರು (ಪೂರ್ವ)ರವರ ಆದೇಶದಂತೆ ದಿನಾಂಕ:26/08/2024ರಂದು ಬೆಳಗ್ಗೆ 6.40ರ ಸಮಯದಲ್ಲಿ ಸದರಿ ಮಳಿಗೆಗೆ ಬೀಗಮುದ್ರೆ ಹಾಕಲಾಗಿರುತ್ತದೆ.
ಸದರಿ ಮಳಿಗೆಗೆ ಬರಬೇಕಾದ ಬಾಕಿ ಬಾಡಿಗೆ ಮೊತ್ತ ಒಟ್ಟು ರೂ.10,80,368/-
ಮೇಲ್ಕಂಡ ಮಳಿಗೆಗಳನ್ನು ಮಹಾನಗರ ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಪೋಲೀಸ್ ಸಿಬ್ಬಂದಿ ಬಂದೋಬಸ್ತ್ ನೊಂದಿಗೆ ಬೀಗಮುದ್ರೆ ಹಾಕಲಾಯಿತೆಂದು ಸಹಾಯಕ ಕಂದಾಯ ಅಧಿಕಾರಿಯರವರು ತಿಳಿಸಿರುತ್ತಾರೆ.