LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
💛 💛 ಸ್ವತಂತ್ರ ಪತ್ರಿಕೋದ್ಯಮ ಬೆಂಬಲಿಸಲು ಲೇಖನದ ಕೆಳಭಾಗದಲ್ಲಿ UPI ಮೂಲಕ ಕಾಣಿಕೆ ನೀಡಿ!
State News

ಬೆಂಗಳೂರಲ್ಲಿ ಸ್ಟಾರ್ ಹೋಟೆಲ್ ಅಂತ ಊಟಕ್ಕೆ ಹೋಗೋ ಮುನ್ನಾ ಈ ಸುದ್ದಿ ಓದಿ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸ್ಟಾರ್ ಹೋಟೆಲ್‌ಗಳು ಹಾಗೂ ಪ್ರಮುಖ ಆತಿಥ್ಯ ಸಂಸ್ಥೆಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸುವ ಬೃಹತ್ ದಾಸ್ತಾನು ಮಳಿಗೆಗಳ (Warehouses) ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ದಿಢೀರ್ ದಾಳಿ ನಡೆಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಾಚರಣೆಯಲ್ಲಿ, ಅವಧಿ ಮುಗಿಯುವ ಹಂತದಲ್ಲಿದ್ದ ಅಪಾರ ಪ್ರಮಾಣದ ಸಾಸ್ ಹಾಗೂ ಪಾನೀಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆಗಸ್ಟ್ 8, 2026ರಂದು ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆಯಾದ್ಯಂತ ಆಹಾರ ಸುರಕ್ಷತಾ ಅಧಿಕಾರಿಗಳನ್ನೊಳಗೊಂಡ ಒಟ್ಟು 30 ವಿಶೇಷ ತಂಡಗಳನ್ನು ನಿಯೋಜಿಸಿ ಈ ತಪಾಸಣೆ ಕೈಗೊಳ್ಳಲಾಗಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಬ್ರಾಂಡ್‌ಗಳಿಗೆ ಹಾಗೂ ನಗರದ 3-ಸ್ಟಾರ್, 5-ಸ್ಟಾರ್ ಹೋಟೆಲ್‌ಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸುವ ಪ್ರಮುಖ ದಾಸ್ತಾನು ಕೇಂದ್ರಗಳ ಮೇಲೆ ಈ ಕಾರ್ಯಾಚರಣೆ ನಡೆದಿದೆ.

ಪ್ರಮುಖ ಕಂಪನಿಗಳ ಗೋದಾಮುಗಳಲ್ಲಿ ತಪಾಸಣೆ:

ನಗರದ ಪ್ರಸಿದ್ಧ ಹೋಟೆಲ್‌ಗಳಿಗೆ ತರಕಾರಿ, ಮಾಂಸ, ಮೀನು ಹಾಗೂ ಇತರೆ ಅಗತ್ಯ ಉತ್ಪನ್ನಗಳನ್ನು ಸರಬರಾಜು ಮಾಡುವ 'ಕೋಲ್ಮಾನ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್' (Coldman Logistics Pvt Ltd) ಮತ್ತು 'ರಾಧಾಕೃಷ್ಣ ಫುಡ್ಯಾಂಡ್ ಲಿಮಿಟೆಡ್' (Radhakrishna Foodland Ltd) ಸಂಸ್ಥೆಗಳ ಮಳಿಗೆಗಳನ್ನು ಅಧಿಕಾರಿಗಳ ತಂಡ ಕೂಲಂಕುಷವಾಗಿ ಪರಿಶೀಲಿಸಿತು. ಈ ವೇಳೆ ಆಹಾರ ಸಂಗ್ರಹಣೆ, ಗುಣಮಟ್ಟ ಹಾಗೂ ಸುರಕ್ಷತಾ ಮಾನದಂಡಗಳ ಪಾಲನೆಯನ್ನು ಪರಿಶೀಲಿಸಲಾಯಿತು.

ವಶಪಡಿಸಿಕೊಂಡ ಕಳಪೆ/ಅವಧಿ ಮುಗಿಯುವ ಹಂತದ ಪದಾರ್ಥಗಳು: ತಪಾಸಣೆ ಸಂದರ್ಭದಲ್ಲಿ ಆಹಾರ ಸುರಕ್ಷತಾ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿ ಸಂಗ್ರಹಿಸಿಡಲಾಗಿದ್ದ ಈ ಕೆಳಗಿನ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ:

  • ಸಾಸ್‌ಗಳು: ಸುಮಾರು 70 ಕೆ.ಜಿ. ಸೋಯಾ ಸಾಸ್ ಹಾಗೂ ಅವಧಿ ಮುಕ್ತಾಯದ ಹಂತದಲ್ಲಿದ್ದ (Near Expiry) ವಿವಿಧ ಮಾದರಿಯ ಸಾಸ್‌ಗಳು.

  • ಪಾನೀಯಗಳು: ಸ್ಟ್ರಾಬೆರಿ ಫ್ಲೇವರ್ ಒಳಗೊಂಡಂತೆ ವಿವಿಧ ಬಗೆಯ ಸುಮಾರು 10 ಲೀಟರ್ ಅವಧಿ ಮುಗಿಯುವ ಹಂತದಲ್ಲಿದ್ದ ತಂಪಾದ ಪಾನೀಯಗಳು.

  • ಆಹಾರ ಮಾದರಿಗಳು: ಗುಣಮಟ್ಟ ವಿಶ್ಲೇಷಣೆಗಾಗಿ 5 ಮಾಂಸದ ಮಾದರಿಗಳು ಹಾಗೂ 13 ಇತರೆ ಆಹಾರ ಸಾಮಗ್ರಿಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಮಳಿಗೆಗಳಲ್ಲಿ ಮಾಂಸವನ್ನು -18C ಅಥವಾ ಅದಕ್ಕಿಂತ ಕಡಿಮೆ ತಾಪಮಾನದ ಕೋಲ್ಡ್ ಸ್ಟೋರೇಜ್‌ನಲ್ಲಿ ಒಂಬತ್ತು ತಿಂಗಳ ಅವಧಿ ನಮೂದಿಸಿ ಸಂಗ್ರಹಿಸಿಟ್ಟಿರುವುದು ಕಂಡುಬಂದಿದೆ.

ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006 ಹಾಗೂ ನಿಯಮಗಳು 2011ನ್ನು ಉಲ್ಲಂಘಿಸಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಇಂತಹ ಆಹಾರ ಸರಬರಾಜು ಸಂಸ್ಥೆಗಳು ಹಾಗೂ ಉದ್ಯಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ

ಮಾಧ್ಯಮ ಬೆಂಬಲಿಸಿ / Support Local Journalism

ನಿಮ್ಮ ಬೆಂಬಲ ಸ್ವತಂತ್ರ ಪತ್ರಿಕೋದ್ಯಮವನ್ನು ಜೀವಂತವಾಗಿರಿಸುತ್ತದೆ. Scan & Pay directly via PhonePe, GPay or Paytm.

0% Gateway Commission — Money goes 100% directly into publisher bank account.
Scan with Any UPI App
Scan QR Code to Support News via UPI
Pre-filled: ₹10.00
UPI ID: khushihost1@ybl
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
SHOCKING: ಬೆಂಗಳೂರಿನ ಸ್ಟಾರ್‌ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ: ಅವಧಿ ಮೀರಿದ ಹಾಲು, ಮಾಂಸ, ಮೀನು ಪತ್ತೆ!ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ, 40 ದಾಟಿದ ನಂತರ ಕಣ್ಣಿನ ಪರೀಕ್ಷೆ ಮಾಡಿಸಿ: ಸಾಗರದಲ್ಲಿ ASP ಡಾ.ಬೆನಕ ಪ್ರಸಾದ್ ಸಲಹೆBIG NEWS: ಸಾಗರದಲ್ಲಿ 'ನಕಲಿ ನೋಟ್' ಜಾಲ ಸಕ್ರಿಯ: ವ್ಯಾಪಾರಿಗಳು, ಸಾರ್ವಜನಿಕರು ಜಾಗೃತರಾಗಿರಲು 'ಸುಭಾಷ್ ಕೌತಳ್ಳಿ' ಮನವಿಶಾಸಕರ ಅಭಿವೃದ್ಧಿ ಶೂನ್ಯ, ಆಡಳಿತಕ್ಕೆ ಜನರೇ ಉತ್ತರಿಸಲಿದ್ದಾರೆ: ಸಾಗರದಲ್ಲಿ ಬಿಜೆಪಿ ನಾಯಕರು ವಾಗ್ದಾಳಿಸಮಾಜವನ್ನು ಎಚ್ಚರಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು: ಸಾಗರದಲ್ಲಿ ಪೌರಾಯುಕ್ತ ಎಚ್.ಕೆ. ನಾಗಪ್ಪ ಅಭಿಪ್ರಾಯಜೈಸ್ವಾಲ್‌ನನ್ನು ತಂಡದಿಂದ ಹೊರಗೆ ಕಳುಹಿಸಿದ್ದು 4 ಪಂದ್ಯಗಳ ನಿಷೇಧದಿಂದ ರಕ್ಷಿಸಲು: ಅಜಿಂಕ್ಯ ರಹಾನೆ ಸ್ಪೋಟಕ ಹೇಳಿಕೆ!AI ಕ್ರಾಂತಿ: ಭಾರತದಲ್ಲಿ ಉದ್ಯೋಗ ಕಡಿತಕ್ಕಿಂತ ಹೊಸ ನೇಮಕಾತಿಯೇ ಹೆಚ್ಚು! Nomura ವರದಿಕ್ಲೀನ್ ಅಪ್ ಬೆಂಗಳೂರಿಗೆ ಆಂದೋಲನದ ರೂಪ ನೀಡಿದ ಬೆಸ್ಕಾಂ: ಎಂಡಿ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಬಿಡದಿ ಟೌನ್ ಶಿಪ್ ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚನೆBREAKING: ಮೊಜ್ತಬಾ ಖಮೇನೇಯಿ ಆರೋಗ್ಯ ಸ್ಥಿತಿ ಗಂಭೀರ! ಇರಾನ್‌ನಲ್ಲಿ ಸಾವಿನ ವದಂತಿ !