Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ನದಿ ತೀರದ ಮರಣ ಗುಂಡಿ: ಅಕ್ರಮ ಗಣಿಗಾರಿಕೆಗೆ ಬಲಿಯಾದ ಜೀವ

ಚೌಡೇಶ್ವರಾಳ ಗ್ರಾಮದ ದುರಂತವನ್ನು ಕೇವಲಅಪಘಾತಎಂದು ಕರೆಯುವುದು ನಿಜವನ್ನು ಮುಚ್ಚುವ ಪ್ರಯತ್ನವಾಗುತ್ತದೆ. ಅದು ಅಪಘಾತವಲ್ಲಇದು ವ್ಯವಸ್ಥೆಯ ನಿರ್ಲಕ್ಷ್ಯ, ಭ್ರಷ್ಟ ರಾಜಕಾರಣಿಗಳ ಲಾಲಸೆ, ಅವರ ಹಿಂಬಾಲಕರ ದೌರ್ಜನ್ಯ ಮತ್ತು ಅಧಿಕಾರಿಗಳ ಮೌನ ಒಪ್ಪಿಗೆಯ ಒಟ್ಟುಗೂಡಿದ ಪರಿಣಾಮ. ಕೃಷ್ಣ ನದಿಯ ಹೊಟ್ಟೆಯನ್ನು 20 ಅಡಿ ಆಳಕ್ಕೆ ಕೊರೆದು, ಅದನ್ನು ಲಾಭದ ಯಂತ್ರವನ್ನಾಗಿ ಮಾಡಿದವರ ದಾಹಕ್ಕೆ ಒಂದು ಅಮಾಯಕ ಯುವಕ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಅವನು ಮಾಡಿದ ತಪ್ಪೇನು? ಬದುಕಿನ ಸರಳ ದಾರಿಯಲ್ಲಿ ನಡೆದದ್ದೇ ಅವನ ಅಪರಾಧವೇ?

ಪ್ರಶ್ನೆ ಚೌಡೇಶ್ವರಾಳಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಸಂಪೂರ್ಣ ಸುರಪುರ ಮತಕ್ಷೇತ್ರದ ಮೇಲೆಯೇ ಒಂದು ಕನ್ನಡಿ ಹಿಡಿಯುತ್ತದೆ. ಸಂವಿಧಾನ ಮತ್ತು ಕಾನೂನುಗಳು ಕಾಗದದಲ್ಲೇ ಉಳಿದು, ನೆಲಮಟ್ಟದಲ್ಲಿ ಅನ್ವಯವಾಗದಿದ್ದರೆ, ಅದನ್ನು ಪ್ರಜಾಪ್ರಭುತ್ವವೆಂದು ಹೇಗೆ ಕರೆಯಬಹುದು? ಸುರಪುರದಲ್ಲಿ ಕಾನೂನು ಇದ್ದರೂ, ಅದರ ಅನುಷ್ಠಾನದಲ್ಲಿ ದೌರ್ಬಲ್ಯ ಇದೆ ಎಂಬ ಆರೋಪಗಳು ವರ್ಷಗಳಿಂದ ಕೇಳಿಬರುತ್ತಿವೆ. ಹಣ ಮತ್ತು ಪ್ರಭಾವದ ಮುಂದೆ ನ್ಯಾಯ ಮೌನವಾಗುತ್ತದೆ ಎಂಬ ಭಾವನೆ ಜನರಲ್ಲಿ ಗಾಢವಾಗುತ್ತಾ ಬಂದಿದೆ.

ಅಲ್ಲಿ ಪರಿಸ್ಥಿತಿ ಒಂದು ಪಕ್ಷಕ್ಕೆ ಅಥವಾ ಒಬ್ಬ ವ್ಯಕ್ತಿಗೆ ಸೀಮಿತವಲ್ಲ. ಹಲವು ವರ್ಷಗಳಿಂದ ಬೆಳೆದಿರುವ ವ್ಯವಸ್ಥಾತ್ಮಕ ವೈಫಲ್ಯ ಇದು. ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಗೋಮುಖ ವ್ಯಾಘ್ರಗಳು” — ಹೊರಗೆ ಸೇವೆಯ ಮುಖವಾಡ ಧರಿಸಿ, ಒಳಗೆ ಸ್ವಾರ್ಥದ ಕತ್ತಿಯನ್ನು ಹೊತ್ತಿರುವವರುಸಾರ್ವಜನಿಕ ಸಂಪತ್ತನ್ನು ದೋಚುತ್ತಿರುವ ಆರೋಪಗಳು ಸಾಮಾನ್ಯವಾಗಿವೆ. ದುರ್ಬಲರು ಪ್ರಶ್ನಿಸಲು ಹೆದರುವ ವಾತಾವರಣ ನಿರ್ಮಾಣವಾದರೆ, ಅದು ಕೇವಲ ಆಡಳಿತದ ದೋಷವಲ್ಲ; ಅದು ಸಮಾಜದ ಆತ್ಮವನ್ನೇ ಕುಗ್ಗಿಸುವ ಸಂಗತಿ.

ಸುರಪುರ ನಗರವನ್ನು ನೋಡಿದರೆ, ವೈಫಲ್ಯದ ಮುಖ ಸ್ಪಷ್ಟವಾಗಿ ಕಾಣಿಸುತ್ತದೆ. ಇಕ್ಕಟ್ಟಾದ ರಸ್ತೆಗಳು, ಅಸ್ವಚ್ಛತೆ, ಯೋಜನೆಗಳ ಅನುಷ್ಠಾನದ ಕೊರತೆಇವೆಲ್ಲವೂ ದಶಕಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ. ಜನರ ಸೇವೆಗೆ ಇರಬೇಕಾದ ನಗರಸಭೆ ಭ್ರಷ್ಟಾಚಾರದ ಆರೋಪಗಳಿಂದ ಕಲುಷಿತವಾಗಿರುವುದು, ಸಾರ್ವಜನಿಕ ಹಣದ ಬಳಕೆ ಕುರಿತು ಜನರಲ್ಲಿ ಹುಟ್ಟಿರುವ ಅನುಮಾನಗಳುಇವುಗಳು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಂದಿಸುತ್ತಿವೆ. ಜನರ ತೆರಿಗೆ ಹಣವೇ ಕೆಲವರ ಭೋಜನೆ ತಟ್ಟೆಯಾಗಿ ಪರಿಣಮಿಸುತ್ತಿದೆ ಎಂಬ ಭಾವನೆ ಅಸಂಬದ್ಧವಲ್ಲ ಎಂಬುದನ್ನು ನೆಲಮಟ್ಟದ ವಾಸ್ತವತೆಗಳು ತೋರಿಸುತ್ತಿವೆ.

ಚೌಡೇಶ್ವರಾಳದ ಯುವಕನ ಮರಣವೂ ಇದೇ ವ್ಯವಸ್ಥೆಯ ಕತ್ತಲೆಯೊಳಗಿನ ಒಂದು ಕಿಡಿ. ಗ್ರಾಮಸ್ಥರು ಹೇಳುವಂತೆ, ಅಕ್ರಮ ಮರಳು ಗಣಿಗಾರಿಕೆ ವರ್ಷಗಳಿಂದ ನಡೆಯುತ್ತಿರುವ ಸಾರ್ವಜನಿಕ ರಹಸ್ಯ. ರಾತ್ರಿ ಹೊತ್ತು ಭಾರೀ ಯಂತ್ರೋಪಕರಣಗಳ ಗದ್ದಲ, ಟ್ರಕ್ಗಳ ಓಡಾಟಎಲ್ಲರಿಗೂ ಗೊತ್ತಿದ್ದರೂ, ಕ್ರಮ ಕೈಗೊಳ್ಳಬೇಕಾದವರು ಮೌನವಾಗಿರುವುದು ಯಾಕೆ? ಮೌನದ ಹಿಂದೆ ಪ್ರಭಾವಿ ಕೈಗಳ ನೆರಳು ಇದೆ ಎಂಬ ಅನುಮಾನ ಜನರಲ್ಲಿ ಬೇರೂರಿದೆ.

ಸಾಧಾರಣ ಜನರು ದೂರು ನೀಡಿದಾಗ ಅದು ಕಡತಗಳ ನಡುವೆ ಸಿಲುಕಿ ನಿಶ್ಶಬ್ದವಾಗಿ ಸಾಯುತ್ತದೆ. ಆದರೆ ಅಕ್ರಮದಿಂದ ಹರಿದುಬರುವ ಹಣದ ನದಿಗಳು ಕೆಲವರ ಕೈಗಳಿಗೆ ಸೇರುತ್ತಿವೆ ಎಂಬ ಮಾತು ಹೊಸದಲ್ಲ. ಹಣದ ಹಾದಿ ಎಲ್ಲಿ ಹೋಗುತ್ತದೆ ಎಂಬುದು ಜನರಿಗೆ ಗೊತ್ತೇ ಇದೆ, ಆದರೆ ಅದನ್ನು ಸಾಬೀತುಪಡಿಸುವ ವ್ಯವಸ್ಥೆಯೇ ದುರ್ಬಲವಾಗಿದೆ. ಇದೇ ಕಾರಣಕ್ಕೆ ಭಯದ ವಾತಾವರಣ ಮುಂದುವರೆಯುತ್ತಿದೆ.

ಒಂದು ತಾಯಿ ತನ್ನ ಮಗನನ್ನು ಕಳೆದುಕೊಂಡು ಅಳುತ್ತಿರುವಾಗ, ಕಣ್ಣೀರಿನ ಬೆಲೆ ಯಾವ ರಾಜಕೀಯಕ್ಕೂ, ಯಾವ ಅಧಿಕಾರಕ್ಕೂ ಅಳೆಯಲು ಸಾಧ್ಯವಿಲ್ಲ. ಒಂದು ತಂದೆಯ ಮೌನ ನೋವು, ಒಂದು ಕುಟುಂಬದ ಭಗ್ನ ಭವಿಷ್ಯಇವುಗಳ ಮುಂದೆ ಯಾವುದೇ ಲಾಭ ಅರ್ಥಹೀನ. ಆದರೂ, ನಮ್ಮ ವ್ಯವಸ್ಥೆಯಲ್ಲಿ ಮರಳು ಕಣಗಳ ಬೆಲೆ ಹೆಚ್ಚು, ಮಾನವ ಪ್ರಾಣಗಳ ಬೆಲೆ ಕಡಿಮೆ ಎಂಬ ಕ್ರೂರ ಸತ್ಯ ಕಾಣಿಸುತ್ತಿದೆ.

ಘಟನೆ ಒಂದು ಎಚ್ಚರಿಕೆಯ ಗಂಟೆ. ಆದರೆ ಇಂತಹ ಗಂಟೆಗಳು ಮೊದಲು ಕೂಡ ಮೊಳಗಿವೆ, ಮತ್ತೆ ಮೊಳಗುವ ಭೀತಿ ಇದೆಏಕೆಂದರೆ ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಕಾನೂನು ಬಡವರಿಗೆ ಮಾತ್ರ ಕಠಿಣವಾಗಿ, ಪ್ರಭಾವಿಗಳಿಗೆ ಮೃದುವಾಗಿ ಅನ್ವಯಿಸಿದರೆ, ನ್ಯಾಯ ಎಂಬ ಪದವೇ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ.

ಇನ್ನಾದರೂ ಪ್ರಶ್ನೆ ಕೇಳುವ ಸಮಯ ಬಂದಿದೆ. ಸುರಪುರದ ಜನರು ಒಗ್ಗಟ್ಟಾಗಿ, ಕಾನೂನಿನ ಮಾರ್ಗದಲ್ಲಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು. ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಒತ್ತಾಯಿಸಬೇಕು. ಕಠಿಣ ನಿಲುವಿನ ಅಧಿಕಾರಿಗಳನ್ನು ನೇಮಕ ಮಾಡುವ ಒತ್ತಡವನ್ನು ನಿರ್ಮಿಸಬೇಕು. ಮಾಧ್ಯಮಗಳು, ನಾಗರಿಕ ಸಂಘಟನೆಗಳು ಮತ್ತು ಜಾಗೃತ ನಾಗರಿಕರು ಅಕ್ರಮಗಳನ್ನು ಬೆಳಕಿಗೆ ತರುವುದು ಅತ್ಯವಶ್ಯಕ.

ಚೌಡೇಶ್ವರಾಳದ ಯುವಕನ ಮರಣ ವ್ಯರ್ಥವಾಗಬಾರದು. ಅದು ಒಂದು ಕುಟುಂಬದ ನೋವಷ್ಟೇ ಅಲ್ಲಅದು ಒಂದು ಪ್ರದೇಶದ ಸತ್ಯವನ್ನು ಬಯಲಿಗೆಳೆದ ಕಿಡಿ. ಕಿಡಿ ದೊಡ್ಡ ಬದಲಾವಣೆಯ ಅಗ್ನಿಯಾಗಿ ರೂಪಾಂತರಗೊಳ್ಳಬೇಕಿದೆ. ಇಲ್ಲವಾದರೆ, ನದಿಯ ಅಡಿಯಲ್ಲಿ ಇನ್ನೂ ಎಷ್ಟು ಕನಸುಗಳು ಹೂಣಾಗಬೇಕೋ ಎಂಬ ಪ್ರಶ್ನೆ ನಮ್ಮನ್ನೆಲ್ಲ ಕಾಡುತ್ತಲೇ ಇರುತ್ತದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಗನ ಕೊಲೆಯ ಸೇಡು: ರಣಚಂಡಿಯಾದ ಹೆತ್ತವಳು! ರಕ್ತಕ್ಕೆ ರಕ್ತವೆಂದು 12 ವರ್ಷಗಳ ಬಳಿಕ ಮುಹೂರ್ತ ಇಟ್ಟ ತಾಯಿ!₹281.48 ಕೋಟಿ ಮಲ್ಲಾಬಾದ್ ಏತ ನೀರಾವರಿ ಯೋಜನೆಯಲ್ಲಿ ಅಕ್ರಮ ಆರೋಪ; ಸರ್ಕಾರದ ತನಿಖೆಗೆ ಆಗ್ರಹಫ್ರೀಡಂ ಹಬ್ಬದಲ್ಲಿ ‘ಮೋದಿ ಮೋದಿ’ ಘೋಷಣೆ; ಡಿಕೆಶಿ ಮಾತಿನಲ್ಲೇ ಜನರಿಗೆ ಟಾಂಗ್ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ದಂಡಿನ ಆಯ್ಕೆ ಮಾಡುವಂತೆ ಸಿದ್ದು ತುಮಕೂರು ಆಗ್ರಹನಕಲಿ ಎನ್‌ಕೌಂಟರ್ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ: ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಗೃಹ ಸಚಿವರಿಗೆ ಮನವಿಹಳಿಸಗರ ಸರ್ಕಾರಿ ಶಾಲೆಯ ದುಸ್ಥಿತಿ: ಪುಟಾಣಿಗಳ ಜೀವದೊಂದಿಗೆ ಚೆಲ್ಲಾಟ; ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ತಪ್ಪದುಗೃಹ ಸಚಿವರ ಘೋಷಣೆಗೆ ಸವಾಲೇ? ಶಹಾಪುರದಲ್ಲಿ ಮತ್ತೆ ಜೋರಾದ ಅಕ್ರಮ ಮರಳು ಸಾಗಾಟಒಂದು ವಾರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ: ಇಲ್ಲದಿದ್ದರೆ ಬೃಹತ್ ಪ್ರತಿಭಟನೆ – ಕರ್ನಾಟಕ ಪ್ರಾಂತ ರೈತ ಸಂಘ ಎಚ್ಚರಿಕೆಕೆನಾಲ್ ಒಡೆದು ಸಾವಿರಾರು ಲೀಟರ್ ನೀರು ಪೋಲು: ರೈತರ ಜಮೀನು ಜಲಾವೃತ, ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪದ ಆರೋಪನಾರಾಯಣಪುರ ಬಲದಂಡೆ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ: ತಕ್ಷಣ ನಿರ್ವಹಣೆಗೆ ರೈತ ಸಂಘ ಆಗ್ರಹ