LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಒಂಟಿಯಾಗಿ ವಾಸವಿದ್ದ ಮಹಿಳೆ ಸುಲಿಗೆ: 12 ಲಕ್ಷ ರೂ. ಮೌಲ್ಯದ ಸ್ವತ್ತು ಸಹಿತ ನಾಲ್ವರು ಅರೆಸ್ಟ್

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಆಗುಂಬೆ ಠಾಣಾ ವ್ಯಾಪ್ತಿಯ ಲಕ್ಕುಂದ ಗ್ರಾಮದ ಒಂಟಿ ಮಹಿಳೆ ವಾಸವಿದ್ದ ಮನೆಯ ಸುಲಿಗೆ ಪ್ರಕರಣದ ಆರೋಪಿತರನ್ನು ಬಂಧಿಸಲಾಗಿದೆ.

ದಿನಾಂಕ:21/04/2026 ರಂದು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕುಂದ ಗ್ರಾಮದ ಒಂಟಿ ಮಹಿಳೆ ವಾಸವಿದ್ದ ಮನೆಯಲ್ಲಿ, ಅಪರಿಚಿತ ಆರೋಪಿತರಿಂದ ಸುಲಿಗೆಯಾಗಿದ್ದು  ಈ ಬಗ್ಗೆ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದರಿ ಪ್ರಕರಣದಲ್ಲಿ ಆರೋಪಿಗಳು ಹಾಗೂ ಮಾಲು ಪತ್ತೆಗಾಗಿ ಎಸ್ಪಿ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜಿ. ಅವರ ಮಾರ್ಗದರ್ಶನದಲ್ಲಿ, ತೀರ್ಥಹಳ್ಳಿ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಅರವಿಂದ ಕಲಗುಜ್ಜಿ ನೇತೃತ್ವದಲ್ಲಿ ಮಾಳೂರು ಸಿಪಿಐ ರಾಜಶೇಖರ್ ಎಲ್., ಪಿಐ ತೀರ್ಥಹಳ್ಳಿ ಪೊಲೀಸ್ ಠಾಣೆ ಇಮ್ರಾನ್ ಬೇಗ್ ಅವರ ನೇತೃತ್ವದಲ್ಲಿ  ಆಗುಂಬೆ ಪೊಲೀಸ್ ಠಾಣೆಯ ಪಿ.ಎಸ್.ಐ ಶಿವನಗೌಡ , ಮಾಳೂರು ಪಿ.ಐ.ಎಸ್ ಸುನಿಲ್ , ಸಿಬ್ಬಂದಿಯವರಾದ ಲಿಂಗೇಗೌಡ, ಸುರಕ್ಷಿತ್, ಕಿರಣ್ ಕುಮಾರ, ಕುಮಾರ್, ಜೋಸೆಫ್ ಮ್ಯಾಥ್ಯೂ, ಸುರೇಶ್ ನಾಯ್ಕ, ಜಯಕುಮಾರ್, ರಮೇಶ ಅಕ್ಕಸಾಲಿ, ವಿನಯ್ ಕುಮಾರ್, ಉಲ್ಲಾಸ್ ನಾಯ್ಕ, ಪ್ರಶಾಂತ.ಓ, ಅನಿಲ್, ನಾಗಾರ್ಜುನ್, ವಿಶ್ವನಾಥ, ಸುನಿಲ್, ರವಿ, ಅರವಿಂದ್, ಚಾಲಕರಾದ ಅವಿನಾಶ್, ತಾಂತ್ರೀಕ ವಿಭಾಗದ ಸಿಬ್ಬಂದಿಯವರಾದ ಗುರುರಾಜ್ ಮತ್ತು ಇಂದ್ರೇಶ್ ಅವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ಈ ತನಿಖಾ ತಂಡವು  ಪ್ರಕರಣದ ಆರೋಪಿತರಾದ   ಭರತ್.ವೈ @ ಭಟ್ಟ, 25 ವರ್ಷ, ವಾಸ ಜೇಡಿಕಟ್ಟೆ, ಹೊಸೂರು, ಕವಲಗುಂದಿ ಪೋಸ್ಟ್, ಭದ್ರಾವತಿ (ತಾ), ಅಶೋಕ, 28 ವರ್ಷ, ಜಾವಳ್ಳಿ ಗ್ರಾಮ, ಶಿವಮೊಗ್ಗ, ಮಹಮ್ಮದ್ ಇಬ್ರಾಹಿಂ ಮೀರಾ @ ಟಕ್ಕರ್, 24 ವರ್ಷ, ವೀರಾಪುರ, ಭದ್ರಾಕಾಲೋನಿ, ಭದ್ರಾವತಿ (ತಾ) ಮತ್ತು ಪಾರ್ತಿಪ್, 25 ವರ್ಷ, ಮೇಲಿನ ಕುರುವಳ್ಳಿ, ತೀರ್ಥಹಳ್ಳಿ (ತಾ) ರವರುಗಳನ್ನು ದಸ್ತಗಿರಿ ಮಾಡಿದೆ.

ಆರೋಪಿತರಿಂದ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ  70 ಗ್ರಾಂ ಬಂಗಾರದ ಆಭರಣಗಳು ಅಂದಾಜು ಮೌಲ್ಯ 10 ಲಕ್ಷ 80,000/-ರೂಗಳು, 56 ಗ್ರಾಂ ಬೆಳ್ಳಿ ವಸ್ತುಗಳು, ಅಂದಾಜು ಮೌಲ್ಯ 16,700/-ರೂಗಳು, ಕೃತ್ಯಕ್ಕೆ ಬಳಸಿದ ಸ್ಕೂಟಿ ಅಂದಾಜು ಮೌಲ್ಯ 50,000/- ರೂ., ಕೃತ್ಯಕ್ಕೆ ಬಳಸಿದ ಇನ್ನೊಂದು ಸ್ಕೂಟಿ, ಅಂದಾಜು ಮೌಲ್ಯ 50,000/- ರೂಗಳು ಸೇರಿ ಒಟ್ಟು 11 ಲಕ್ಷ 96700 ರೂ. ಮಾಲನ್ನು ವಶಪಡಿಸಿಕೊಂಡಿರುತ್ತಾರೆ.

ಸದರಿ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿ ಮತ್ತು ಮಾಲು ಪತ್ತೆ ಮಾಡಿದ  ತನಿಖಾ ತಂಡಕ್ಕೆ ಪೊಲೀಸ್ ಅಧೀಕ್ಷಕ ನಿಖೀಲ್ ಪ್ರಶಂಶಿಸಿ ಅಭಿನಂದಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING: ಸುಲಿಗೆ-ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೋಲ್ಕತ್ತಾ ಡಿಸಿಪಿ ಶಾಂತನು ಸಿನ್ಹಾ ಬಿಸ್ವಾಸ್ ಅರೆಸ್ಟ್BIG BREAKING: ವಾಹನ ಸವಾರರಿಗೆ ಬೆಲೆ ಏರಿಕೆ ಶಾಕ್: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ತಲಾ 3 ರೂ. ಏರಿಕೆ | Petrol, diesel prices hikedಬೆಳಗ್ಗೆ ಎಷ್ಟು ಗಂಟೆಗೆ ನಿದ್ರೆಯಿಂದ ಎದ್ದೇಳಬೇಕು..? 99% ಜನರಿಗೆ ಸರಿಯಾದ ಸಮಯವೇ ತಿಳಿದಿಲ್ಲ!BIG NEWS : ಸರ್ಕಾರಿ ನೌಕರರಿಗೆ ವಾರಕ್ಕೆ 2 ದಿನ ಆಫೀಸ್ ರಜೆ ? ಮನೆಯಿಂದಲೇ ಕೆಲಸ ಮಾಡಲು ಆದೇಶ !ALERT : ಅತಿಯಾದ್ರೆ ಅಮೃತವೂ ವಿಷ: ಏಕಕಾಲಕ್ಕೆ 5ಕ್ಕೂ ಹೆಚ್ಚು ಮಾತ್ರೆ ಸೇವನೆ ಪ್ರಾಣಕ್ಕೆ ಕಂಟಕ – ತಜ್ಞರ ಎಚ್ಚರಿಕೆಹಣದಿಂದ ಹಣ ಗಳಿಸುವ ಅದ್ಭುತ ಐಡಿಯಾ.. ಇಂದೇ ಆರಂಭಿಸಿ! ಸೀಕ್ರೆಟ್ ಟಿಪ್ಸ್..ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ CNG ದರವೂ ಹೆಚ್ಚಳBIG BREAKING: ನೀಟ್ ಯುಜಿ ಪರೀಕ್ಷೆಯ ಹೊಸ ದಿನಾಂಕ ಘೋಷಣೆ: ಜೂನ್ 21 ರಂದು ಮರು ಪರೀಕ್ಷೆಗೆ ಅಧಿಸೂಚನೆ ಪ್ರಕಟ | NEET-UG ExamBIG NEWS : ಉತ್ತರ ಪ್ರದೇಶದಲ್ಲಿ ಭೀಕರ ಗಾಳಿಮಳೆ : 111 ಮಂದಿ ಸಾವುBIG NEWS: ಹಾವು ಕಚ್ಚಿ ದುರಂತ: ಕಾಂಗ್ರೆಸ್ ಮುಖಂಡ ಕೇತನ್ ಭಾಟಿಕರ್ ದುರ್ಮರಣ