K2kannadanews.in
Crime News ರಾಯಚೂರು : ನಗರದ ಕೋಟೆ (Fort) ಪ್ರದೇಶದಲ್ಲಿನ ಬೆಟ್ಟದಗೇರಿಯ ಪುರಾತನ ಕೋದಂಡರಾಮ ದೇವಾಲಯದ (Temple) ಕಟ್ಟೆಯನ್ನ ದ್ವಂಸ ಮಾಡಲಾಗಿದ್ದು, ದೇವಾಲಯದ ಅರ್ಚಕರೇ ನಿಧಿ ಆಸೆಗೆ ಧ್ವಂಸ ಮಾಡಿದ್ದಾರೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.
https://youtu.be/3s4zx8ntUpQ?si=qPo4NMriKkp-VRMb
ಮಧ್ಯರಾತ್ರಿ ವೇಳೆ ಘಟನೆ ನಡೆದಿದ್ದು ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಗಲಾಟೆ ಮಾಡಿದ್ದಾರೆ. ಭಕ್ತರಿಗೂ ತಿಳಿಸದೇ, ಉಳಿದ ಅರ್ಚಕರಿಗೂ ಮಾಹಿತಿ ನೀಡದೇ ರಾತ್ರೋರಾತ್ರಿ ದೇವರ ಕಟ್ಟೆ ಧ್ವಂಸ ಮಾಡಿರುವುದು ನಿಧಿ ಆಸೆಗೆ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ನಿಧಿ ಆಸೆಗೆ ಇಲ್ಲಿನ ದೇವಾಲಯದ ಮೂರ್ತಿಗಳನ್ನ ಭಗ್ನಗೊಳಿಸಲಾಗಿತ್ತು. ಈಗ ದೇವಾಲಯ ಕಟ್ಟೆಯನ್ನ ಧ್ವಂಸಗೊಳಿಸಿದ್ದಾರೆ ಅಂತ ನಿವಾಸಿಗಳು ಆರೋಪಿಸಿದ್ದಾರೆ. ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅರ್ಚಕರನ್ನ ಕರೆದು ವಿಚಾರಣೆ ನಡೆಸಿದ್ದಾರೆ.