Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಅಪಪ್ರಚಾರದ ಹಿಂದೆ ಯಾರು? ಸುರಪುರ ರಾಜಕೀಯದ ಸತ್ಯ ಮತ್ತು ವಾಸ್ತವ

ಇತ್ತೀಚಿನ ದಿನಗಳಲ್ಲಿ ಸುರಪುರ ಮತಕ್ಷೇತ್ರದ ರಾಜಕೀಯ ವಾತಾವರಣದಲ್ಲಿ ಉದ್ದೇಶಪೂರ್ವಕ ಅಪಪ್ರಚಾರಕ್ಕೆ ವೇದಿಕೆ ಸಿದ್ಧವಾಗುತ್ತಿರುವುದು ಗಮನಕ್ಕೆ ಬರುತ್ತಿದೆ. ರಾಜಾ ವೆಂಕಟಪ್ಪ ನಾಯಕ ಧಣಿಯವರ ಹೆಸರನ್ನು ದುರುಪಯೋಗಪಡಿಸಿಕೊಂಡು, ಸಿಂಪತಿ ರಾಜಕೀಯದ ಮುಖವಾಡ ಹಾಕಿ, ಸುರಪುರ ಮತಕ್ಷೇತ್ರದ ಶಾಸಕರಾದ ರಾಜಾ ವೇಣುಗೋಪಾಲ ನಾಯಕ ಧಣಿಯವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹರಡಲಾಗುತ್ತಿದೆ. ಇಂತಹ ಪ್ರಯತ್ನಗಳು ಜನರನ್ನು ಗೊಂದಲಕ್ಕೆ ತಳ್ಳುವ ದುರುದ್ದೇಶ ಹೊಂದಿದ್ದರೂ, ಕ್ಷೇತ್ರದ ಪ್ರಜ್ಞಾವಂತ ಜನತೆಗೆ ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸವನ್ನು ಅರಿಯುವ ಸಾಮರ್ಥ್ಯವಿದೆ.



ಹಿನ್ನಲೆ: 2023ರ ಚುನಾವಣೆಯ ಸತ್ಯ


2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಾ ವೆಂಕಟಪ್ಪ ನಾಯಕ ಧಣಿಯವರು ಕೆಲವೊಬ್ಬರನ್ನು ಕೆಲವು ಸ್ಪಷ್ಟ ಕಾರಣಗಳಿಂದ ದೂರವಿಟ್ಟಿದ್ದರು. ಆ ಕಾರಣಗಳು ವೈಯಕ್ತಿಕವಾಗಿರಲಿ ಅಥವಾ ರಾಜಕೀಯವಾಗಿರಲಿ, ಅವು ಕ್ಷೇತ್ರದ ಜನತೆಗೆ ಈಗಾಗಲೇ ತಿಳಿದಿರುವ ವಿಷಯಗಳಾಗಿವೆ. ಆದರೆ ಇಂದು, ಅದೇ ವಿಷಯವನ್ನು ಮರೆತು, ಹಿಂದಿನ ಒಡನಾಟಗಳನ್ನು ನೆಪ ಮಾಡಿಕೊಂಡು ಅಪಪ್ರಚಾರ ನಡೆಸುತ್ತಿರುವುದು ರಾಜಕೀಯದ ನೈತಿಕ ದೌರ್ಬಲ್ಯವನ್ನು ಬಹಿರಂಗಪಡಿಸುತ್ತದೆ.


ಸುರಪುರ ರಾಜಕಾರಣದಲ್ಲಿ ರಾಜಾ ವೆಂಕಟಪ್ಪ ನಾಯಕ ಧಣಿಯವರು ಯಾವತ್ತೂ ಎಲ್ಲಾ ಸಮುದಾಯದ ಜನರೊಂದಿಗೆ ಸಮನ್ವಯದಿಂದ ನಡೆದುಕೊಂಡವರು ಎಂಬುದು ಇತಿಹಾಸ. ಅದೇ ಪರಂಪರೆಯಂತೆ ಇಂದು ರಾಜಾ ವೇಣುಗೋಪಾಲ ನಾಯಕ ಧಣಿಯವರು ಕೂಡ ಯಾವುದೇ ಸಮುದಾಯ ಭೇದವಿಲ್ಲದೆ, ಎಲ್ಲರ ವಿಶ್ವಾಸ ಗಳಿಸಿಕೊಂಡು ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.



ಜನಬೆಂಬಲವೇ ಅಪಪ್ರಚಾರದ ಬೇರು ಕತ್ತರಿಸಿದೆ


ರಾಜಾ ವೇಣುಗೋಪಾಲ ನಾಯಕ ಧಣಿಯವರು ಸುರಪುರ ಮತಕ್ಷೇತ್ರದ ಎಲ್ಲಾ ಸಮುದಾಯಗಳ ಆಶೀರ್ವಾದದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಜನಬೆಂಬಲವನ್ನು ಸಹಿಸಲಾಗದೆ, ಕೆಲವೊಬ್ಬರು ಬೇರೆವರ ಮಾತಿಗೆ ಮರುಳಾಗಿ, ಹಿಂದಿನ ಎಲ್ಲಾ ಒಡನಾಟಗಳನ್ನು ಮರೆತು, ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ರಾಜಕೀಯ ಅಪಪ್ರಚಾರವಾಗಿ ಪರಿವರ್ತಿಸುತ್ತಿದ್ದಾರೆ.


ಸತ್ಯವೇನೆಂದರೆ, ಯಾವ ಶಾಸಕರಿಗೂ ಪ್ರತಿಯೊಬ್ಬ ವ್ಯಕ್ತಿಗೆ ಪ್ರತ್ಯೇಕವಾಗಿ ಕೆಲಸ ಕೊಡಲು ಸಾಧ್ಯವಿಲ್ಲ. ಆದರೆ, ಜನತೆಗೆ ನೀಡಿದ ಭರವಸೆಗಳ ಅನುಷ್ಠಾನದಲ್ಲಿ ಪ್ರಾಮಾಣಿಕತೆ ತೋರಿಸುವುದೇ ನಿಜವಾದ ನಾಯಕತ್ವ. ಈ ಅಂಶದಲ್ಲಿ ರಾಜಾ ವೇಣುಗೋಪಾಲ ನಾಯಕ ಧಣಿಯವರು ಕೊಟ್ಟ ಮಾತಿನಂತೆ ಕ್ಷೇತ್ರದ ಪ್ರತಿಯೊಂದು ಕುಟುಂಬಕ್ಕೂ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.



ಅಭಿವೃದ್ಧಿಯ ಅಂಕಿ-ಅಂಶಗಳೇ ಉತ್ತರ


ಸುರಪುರ ಮತಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ, ಮೂಲಸೌಕರ್ಯ, ಸಾರ್ವಜನಿಕ ಸೌಲಭ್ಯಗಳ ವಿಸ್ತರಣೆ, ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು, ಸಮಾಜ ಕಲ್ಯಾಣ ಯೋಜನೆಗಳು – ಈ ಎಲ್ಲ ಕ್ಷೇತ್ರಗಳಲ್ಲಿ ಗಮನಾರ್ಹ ಕೆಲಸಗಳು ನಡೆಯುತ್ತಿವೆ. ಅಭಿವೃದ್ಧಿ ಪ್ರಕ್ರಿಯೆ ನಡೆಯುತ್ತಿರುವಾಗ, ವೈಯಕ್ತಿಕ ಅಸಮಾಧಾನ ಹೊಂದಿರುವ ಕೆಲವರಿಗೆ ಅದು ಅಸಹನೀಯವಾಗುವುದು ಸಹಜ. ಆ ಅಸಹನೆಯನ್ನು ಅಪಪ್ರಚಾರದ ರೂಪದಲ್ಲಿ ಹೊರಹಾಕುವುದು ಮಾತ್ರ ರಾಜಕೀಯ ಸಂಸ್ಕೃತಿಗೆ ವಿರುದ್ಧ.



ಸಾಮಾಜಿಕ ಜಾಲತಾಣ: ಜವಾಬ್ದಾರಿ ಬೇಕು


ಇತ್ತೀಚೆಗೆ ಕೆಲವೊಂದು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು, ಶಾಸಕರ ವಿರುದ್ಧ ವಿಡಿಯೋಗಳ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳಿಗೆ ಸುರಪುರ ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ. ಅಲ್ಲದೆ, ರಾಜಾ ವೆಂಕಟಪ್ಪ ನಾಯಕ ಧಣಿಯವರ ಕುಟುಂಬದ ಹೆಸರನ್ನು ಬಳಸಿಕೊಳ್ಳುವ ನೈತಿಕ ಹಕ್ಕೂ ಅವರಿಗೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ.


ಸಾಮಾಜಿಕ ಜಾಲತಾಣಗಳು ಜನತಂತ್ರದ ಬಲವಾದ ಮಾಧ್ಯಮಗಳಾಗಬೇಕು; ಅಪಪ್ರಚಾರದ ಅಸ್ತ್ರವಾಗಬಾರದು.



ನಿಷ್ಠಾವಂತ ರಾಜಕೀಯ ಸಂಸ್ಕೃತಿ


ರಾಜಾ ವೇಣುಗೋಪಾಲ ನಾಯಕ ಸಾಹೇಬರು ನಿಷ್ಠಾವಂತ ಕಾರ್ಯಕರ್ತರನ್ನು ಮತ್ತು ಹಿರಿಯ ಮುಖಂಡರನ್ನು ಯಾವತ್ತೂ ಮರೆತಿಲ್ಲ. ನಿಷ್ಠಾವಂತ ಕಾರ್ಯಕರ್ತರ ಸಂಸ್ಕೃತಿ ಎಂದಿಗೂ ಹಿಂದಿನಿಂದ ಚೂರಿ ಹಾಕುವದಾಗಿರದು. ಸಣ್ಣಪುಟ್ಟ ವಿಚಾರಗಳಿದ್ದರೆ ಮುಖಾಮುಖಿಯಾಗಿ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುವುದು ನಿಷ್ಠಾವಂತ ರಾಜಕೀಯದ ಗುರುತು.


ರಾಜಾ ವೇಣುಗೋಪಾಲ ನಾಯಕ ಧಣಿಯವರು ಹಾಗೂ ಅವರ ನಾಲ್ವರು ಸಹೋದರರು ಯಾವ ಮೌಲ್ಯಗಳನ್ನು ಹಿಡಿದುಕೊಂಡು ನಡೆದುಕೊಂಡು ಬರುತ್ತಿದ್ದಾರೆ ಎಂಬುದು ಸುರಪುರದ ನಿಷ್ಠಾವಂತ ಜನತೆಗೆ ಚೆನ್ನಾಗಿ ಗೊತ್ತಿದೆ.



ಜನತೆ ಅಂತಿಮ ತೀರ್ಪುಗಾರರು


ಅಪಪ್ರಚಾರದ ರಾಜಕೀಯಕ್ಕೆ ಸುರಪುರ ಮತಕ್ಷೇತ್ರದ ಜನತೆ ಯಾವತ್ತೂ ಮನ್ನಣೆ ಕೊಟ್ಟಿಲ್ಲ. ಇತಿಹಾಸದಲ್ಲಿಯೂ ಕೊಡಿಲ್ಲ, ಮುಂದೆಯೂ ಕೊಡೋದಿಲ್ಲ. ಸುಳ್ಳು ಹೆಚ್ಚು ದಿನ ನಡೆಯುವುದಿಲ್ಲ. ಸತ್ಯ, ಸೇವೆ ಮತ್ತು ಅಭಿವೃದ್ಧಿಯೇ ಸದಾ ಗೆಲ್ಲುವ ಮೌಲ್ಯಗಳು.


ಸುರಪುರದ ರಾಜಕೀಯ ದಿಕ್ಕು ಸ್ಪಷ್ಟವಾಗಿದೆ. ಅದು ದ್ವೇಷದ ರಾಜಕೀಯವಲ್ಲ, ಅಭಿವೃದ್ಧಿಯ ರಾಜಕೀಯ. ಅಪಪ್ರಚಾರದ ಶಬ್ದಗಳು ಕ್ಷಣಿಕವಾಗಿರಬಹುದು; ಆದರೆ ಜನನಂಬಿಕೆಯ ಮೌಲ್ಯ ಶಾಶ್ವತ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಗನ ಕೊಲೆಯ ಸೇಡು: ರಣಚಂಡಿಯಾದ ಹೆತ್ತವಳು! ರಕ್ತಕ್ಕೆ ರಕ್ತವೆಂದು 12 ವರ್ಷಗಳ ಬಳಿಕ ಮುಹೂರ್ತ ಇಟ್ಟ ತಾಯಿ!₹281.48 ಕೋಟಿ ಮಲ್ಲಾಬಾದ್ ಏತ ನೀರಾವರಿ ಯೋಜನೆಯಲ್ಲಿ ಅಕ್ರಮ ಆರೋಪ; ಸರ್ಕಾರದ ತನಿಖೆಗೆ ಆಗ್ರಹಫ್ರೀಡಂ ಹಬ್ಬದಲ್ಲಿ ‘ಮೋದಿ ಮೋದಿ’ ಘೋಷಣೆ; ಡಿಕೆಶಿ ಮಾತಿನಲ್ಲೇ ಜನರಿಗೆ ಟಾಂಗ್ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ದಂಡಿನ ಆಯ್ಕೆ ಮಾಡುವಂತೆ ಸಿದ್ದು ತುಮಕೂರು ಆಗ್ರಹನಕಲಿ ಎನ್‌ಕೌಂಟರ್ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ: ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಗೃಹ ಸಚಿವರಿಗೆ ಮನವಿಹಳಿಸಗರ ಸರ್ಕಾರಿ ಶಾಲೆಯ ದುಸ್ಥಿತಿ: ಪುಟಾಣಿಗಳ ಜೀವದೊಂದಿಗೆ ಚೆಲ್ಲಾಟ; ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ತಪ್ಪದುಗೃಹ ಸಚಿವರ ಘೋಷಣೆಗೆ ಸವಾಲೇ? ಶಹಾಪುರದಲ್ಲಿ ಮತ್ತೆ ಜೋರಾದ ಅಕ್ರಮ ಮರಳು ಸಾಗಾಟಒಂದು ವಾರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ: ಇಲ್ಲದಿದ್ದರೆ ಬೃಹತ್ ಪ್ರತಿಭಟನೆ – ಕರ್ನಾಟಕ ಪ್ರಾಂತ ರೈತ ಸಂಘ ಎಚ್ಚರಿಕೆಕೆನಾಲ್ ಒಡೆದು ಸಾವಿರಾರು ಲೀಟರ್ ನೀರು ಪೋಲು: ರೈತರ ಜಮೀನು ಜಲಾವೃತ, ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪದ ಆರೋಪನಾರಾಯಣಪುರ ಬಲದಂಡೆ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ: ತಕ್ಷಣ ನಿರ್ವಹಣೆಗೆ ರೈತ ಸಂಘ ಆಗ್ರಹ