LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜನವರಿ 9ರಿಂದ 11ರವರೆಗೆ ಬೆಂಗಳೂರಿನಲ್ಲಿ ದಕ್ಷಿಣ ಡೈರಿ ಶೃಂಗಸಭೆ

ಬೆಂಗಳೂರು: ಕ್ಷೀರ ಕ್ರಾಂತಿಯಲ್ಲಿ ಜಾಗತಿಕವಾಗಿ ಭಾರತ ಮುಂಚೂಣಿಯಲ್ಲಿದ್ದು, ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹೈನೋದ್ಯಮಕ್ಕೆ ಹೊಸ ಆಯಾಮ ನೀಡುವ ದೃಷ್ಟಿಯಿಂದ ದಕ್ಷಿಣ ವಲಯ ಭಾರತೀಯ ಡೈರಿ ಅಸೋಸಿಯೇಷನ್ ನಿಂದ ನಗರದ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ನಲ್ಲಿ ಜನವರಿ 9 ರಿಂದ 11 ರವರೆಗೆ ಚೊಚ್ಚಲ ಪ್ರಾದೇಶಿಕ ಸಮ್ಮೇಳನ - ದಕ್ಷಿಣ ಡೈರಿ ಶೃಂಗಸಭೆ 2025 ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಡೈರಿ ಸಂಘದ ಅಧ್ಯಕ್ಷ ಡಾ.ಸತೀಶ್ ಕುಲಕರ್ಣಿ, ಸಂಘಟನಾ ಕಾರ್ಯದರ್ಶಿ ರಾಮಚಂದ್ರ, ಮೂರು ದಿನಗಳ ಕಾರ್ಯಕ್ರಮದಲ್ಲಿ ದೇಶಾದ್ಯಂತ ಸಹಸ್ರಾರು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಹೈನುಗಾರಿಕೆ ವಲಯದ ಸಂಶೋಧಕರು, ತಜ್ಞರು, ವಿದ್ಯಾರ್ಥಿಗಳು, ರೈತರು, ವೃತ್ತಿಪರರು ಮತ್ತು ಆಯೋಜಕರು, ಡೈರಿ ಉದ್ಯಮದ ಉದ್ಯಮಿಗಳು 3-ದಿನದ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 10 ತಾಂತ್ರಿಕ ಮತ್ತು ವೈಜ್ಞಾನಿಕ ಗೋಷ್ಠಿಗಳು ನಡೆಯಲಿದ್ದು, ಪರಿಣಿತರು 40 ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಲಿದ್ದಾರೆ. ವಿಷಯ ತಜ್ಞರು ಹೈನುಗಾರಿಕೆ ಉದ್ಯಮ ಎದುರಿಸುತ್ತಿರುವ ಸವಾಲುಗಳ ಕುರಿತು ಬೆಳಕು ಚೆಲ್ಲಲಿದ್ದಾರೆ ಎಂದರು.

ಹೈನೋದ್ಯಮದಲ್ಲಿ ತೊಡಗಿರುವ ಹೆಸರು ಮಾಡಿರುವ ಮಹಿಳೆಯರಿಗೆ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸಂಘದಿಂದ ಒಂದು ಹಸು ತೆಗೆದುಕೊಳ್ಳುವ ಹಣವನ್ನು ಮಹಿಳೆಯರಿಗೆ ನೀಡಲಾಗುತ್ತದೆ. ಅವರು ಅದರಿಂದ ಹೈನುಗಾರಿಕೆಯನ್ನು ಉತ್ತೇಜನ ಮಾಡಿಕೊಳ್ಳಬಹುದು ಎಂದರು. ದೇಶದಲ್ಲಿ  ಹೈನುಗಾರಿಕೆಯಲ್ಲಿ ಮಹಿಳೆಯರ ಪಾತ್ರದ ಕುರಿತು ಚರ್ಚೆಗಳು ನಡೆಯಲಿವೆ ಎಂದರು.

ಸಮ್ಮೇಳನದಲ್ಲಿ ಕೃಷಿ, ಡೈರಿ ವಸ್ತುಗಳ ಪ್ರದರ್ಶನದಲ್ಲಿ

ಡೈರಿ ಉತ್ಪನ್ನಗಳು ಮತ್ತು ಯಂತ್ರೋಪಕರಣಗಳನ್ನು ಪ್ರದರ್ಶಿಸಲಾಗುತ್ತಿದೆ. ಯುವ ಸಂಶೋಧಕರ ಸಂಶೋಧನೆಗಳನ್ನು ಪ್ರದರ್ಶಿಸಲು ಪ್ರೋತ್ಸಾಹಿಸಲು ಜನವರಿ 9 ರಂದು ಪೋಸ್ಟರ್ ಪ್ರಸ್ತುತಿಯನ್ನು ಸಹ ಆಯೋಜಿಸಲಾಗಿದೆ. ಎಲ್ಲಾ ಸುಮಾರು 70 ಪೋಸ್ಟರ್ಗಳನ್ನು ಸಂಶೋಧಕರು ಪ್ರಸ್ತುತಪಡಿಸಲಾಗುತ್ತದೆ ಎಂದು ಹೇಳಿದರು.

ಭಾರತೀಯ ಡೈರಿ ಅಸೋಸಿಯೇಷನ್ನ ಮಾಜಿ ಅಧ್ಯಕ್ಷ ಡಾ.ಆರ್.ಪಿ.ಅನೇಜ ಮತ್ತು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಆನಂದ್ ಅವರು ಟೆಕ್ನೋ-ವಾಣಿಜ್ಯ ಎಕ್ಸ್ ಪೋ ಉದ್ಘಾಟಿಸಲಿದ್ದಾರೆ. ಬಯೋ-ಟೆಕ್ನಾಲಜಿ ಅಪೆಕ್ಸ್ ಬಾಡಿ ಏಬಲ್ನ ಅಧ್ಯಕ್ಷ ಮತ್ತು ನೊವೊನೆಸಿಸ್ನ ಮಾಜಿ ವ್ಯವಸ್ಥಾಪಕ ನಿರ್ದೇಶಕರ ಜಿ.ಎಸ್.ಕೃಷ್ಣನ್, ಬಿ.ವಿ.ಕೆ. ದೊಡ್ಲ ಡೈರಿ ಸಿಇಒ ರೆಡ್ಡಿ ಮತ್ತಿತರು ಭಾಗಹಿಸಲಿದ್ದಾರೆ ಎಂದರು.

ಜನವರಿ 9 ರಂದು ಸಂಜೆ ಅಭಿನವ್, ಪ್ರಸಿದ್ಧ ರಾಜೇಂದ್ರ ಮತ್ತು ನಿರುಪಮಾ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಎರಡನೇ ದಿನದಂದು, ವೈಜ್ಞಾನಿಕ ಅಧಿವೇಶನ ನಿಗದಿಪಡಿಸಲಾಗಿದೆ, ಇದರಲ್ಲಿ ಸುಮಾರು 30 ಪ್ರಖ್ಯಾತ ಭಾಷಣಕಾರರು ಹಾಲು ಉತ್ಪಾದನೆ ಮತ್ತು ಸಂಸ್ಕರಣೆಯ ವಿವಿಧ ಅಭಿವೃದ್ಧಿ ಅಂಶಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.

ಹಾಲು ಒಕ್ಕೂಟದ ಮಾಜಿ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಎಚ್.ಚೆನ್ನೇಗೌಡ ಮತ್ತು ಡಾ.ಬಿ.ಎಸ್.ಗಂಗಾಧರ, ತೆಲಂಗಾಣದ ದೊಡ್ಲ ಡೈರಿಯ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ರೆಡ್ಡಿ, ಕೇರಳದ ಶಾಲಿನಿ ಗೋಪಿನಾಥ್ ಮತ್ತು ತಮಿಳುನಾಡಿನ ಕೊಯಮತ್ತೂರಿನ ಮಹಾಲಕ್ಷ್ಮಿ ಡೈರಿಯ ವ್ಯವಸ್ಥಾಪಕ ನಿರ್ದೇಶಕ ಆರ್. ಪೊನ್ನುಸಾಮಿ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಕಾರ್ಯದರ್ಶಿ ಡಾ.ಎನ್. ಸುಭಾಷ್, ಖಚಾಂಚಿ ಡಾ.ಕೆ.ಎಸ್.ರಾಯ್, ನಾಗಪುರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಸಿ.ಎಸ್.ಪ್ರಸಾದ್, ನಬಾರ್ಡ್ ನ ನಿವೃತ್ತ ಮಹಾ ವ್ಯವಸ್ಥಾಪಕ ಡಾ.ಪ್ರಕಾಶ್ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST