
ಉಪ್ಪಾರ ಸಮಾಜದ ನೂತನ ಅಬಕಾರಿ ಡಿವೈಎಸ್ಪಿ ವಿ ಕೀರ್ತಿ ಕುಮಾರ್ ಅವರು ಬುನಾದಿ ತರಭೇತಿ ಪಡೆದು ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆಗೈದ ಚಾಮರಾಜನಗರ ಜಿಲ್ಲೆ ಉಪ್ಪಾರ ಸಮಾಜದ ಯುವ ಕೆಎಎಸ್ ಅಧಿಕಾರಿ ವಿ. ಕೀರ್ತಿ ಕುಮಾರ್ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ನಿರುಗುಂದ ಗ್ರಾಮದ ನಿವೃತ್ತ ಶಿಕ್ಷಕರು ಹಾಗೂ ಸಕ್ರೀಯ ಉಪ್ಪಾರ ಸಮಾಜ ಸೇವಕರೂ ಆದ ತಿಪ್ಪೇಶಪ್ಪ ಅವರ ಮಗನಾಗಿದ್ದರೆ.ಕೀರ್ತಿಕುಮಾರ್ ಮೈಸೂರಿನ ಕರ್ನಾಟಕ ಪೋಲೀಸ್ ಅಕಾಡೆಮಿ (ಕೆಪಿಎ)ಯಲ್ಲಿ 2023ರ ಮಾರ್ಚ್ 1ರಿಂದ 2024ರ ಫೆಬ್ರವರಿ 13ರವರೆಗೆ ಬುನಾದಿ ತರಭೇತಿ ಪೂರೈಸಿದ 6 ಡಿವೈಎಸ್ಪಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ ನಡೆಯಿತು. ಅದರಲ್ಲಿ ಕೀರ್ತಿ ಕುಮಾರ್ ಸಹಾ ಒಬ್ಬರು.
ಅಬಕಾರಿ ಇಲಾಖೆಯಲ್ಲಿ ಇನ್ನು ಎತ್ತರದ ಹುದ್ದೆಗೆ ಹೀಗಿರಲಿ ಎಂದು ಉಪ್ಪಾರ ಸಮಾಜದ ಬಾಂಧವರು ಶುಭಹಾರೈಸಿದರು. ಪುತ್ರ ಕೀರ್ತಿ ಅವರುಗೆ ತಂದೆ ತಾಯಿ ಸಾತ ನೀಡಿದರು.