Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ನೇರ ನಿಷ್ಠುರ ಕ್ರಾಂತಿಕಾರಿ ಶ್ರೀ ನಿಜಗುಣಾನಂದ ಸ್ವಾಮೀಜಿ

ಶ್ರೀ ನಿಜಗುಣಾನಂದ ಸ್ವಾಮೀಜಿ ಅವರು ಕರ್ನಾಟಕದ ಪ್ರಸಿದ್ಧ ವಿಚಾರವಾದಿ, ಚಿಂತಕರು ಮತ್ತು ಸಮಾಜ ಸುಧಾರಕರು ಇವರು ಮುಂಡರಗಿಯ ತೋಂಟದಾರ್ಯ ಮಠ ಮತ್ತು ಬೈಲೂರು ನಿಷ್ಕಲ ಮಂಟಪದ ಪೀಠಾಧ್ಯಕ್ಷರು. ನಾಡಿನ ಶ್ರೇಷ್ಠ ಮಠಾಧೀಶರಲ್ಲಿ ಅಗ್ರಗಣ್ಯ ಮಠಾಧೀಶರು ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮೀಜಿಯವರು. ವೈಚಾರಿಕ ಚಿಂತನೆಗಳು, ಮೂಢನಂಬಿಕೆ ವಿರೋಧಿ ನಿಲುವುಗಳು ಮತ್ತು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಶ್ರೀಗಳು ನಾಡಿನಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಬಸವಾದಿ ಶರಣರ ತತ್ವಗಳನ್ನು ಬಲವಾಗಿ ಪ್ರತಿಪಾದಿಸುವ ಇವರು, ಧರ್ಮದ ಹೆಸರಿನಲ್ಲಿ ನಡೆಯುವ ಮೌಢ್ಯ, ಕಂದಾಚಾರ ಹಾಗೂ ಶೋಷಣೆಯನ್ನು ನೇರವಾಗಿ ವಿರೋಧಿಸುತ್ತಾರೆ.
ಜಾತಿ ವ್ಯವಸ್ಥೆ, ಅಸಮಾನತೆಯ ವಿರುದ್ಧ ಧ್ವನಿ ಎತ್ತುವ ಮೂಲಕ ಸೌಹಾರ್ದತೆ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಬಿತ್ತುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇವರ ಪ್ರವಚನಗಳು ಮತ್ತು ದಾರ್ಶನಿಕ ಭಾಷಣಗಳು ಸಮಾಜದ ಜಾಗೃತಿಗೆ ಹೆಚ್ಚು ಪ್ರಸಿದ್ಧವಾಗಿವೆ. ಇವರು ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ವೇದಿಕೆಗಳ ಮೂಲಕ ಜನಸಾಮಾನ್ಯರನ್ನು ತಲುಪುತ್ತಿದ್ದಾರೆ. ಅಂತೆಯೇ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದ ಆಶ್ರಮದಿಂದ ಬಸವ ತತ್ವದ ಬೆಳಕನ್ನು ನಾಡಿನ ತುಂಬೆಲ್ಲ ಪಸರಿಸುತ್ತಿರುವ ದಾರ್ಶನಿಕರು, ವೈಚಾರಿಕತೆಯ ಚಿಂತಕರಾಗಿದ್ದಾರೆ. 
ಕಾವಿ ತೊಟ್ಟ ಕ್ರಾಂತಿಕಾರಿ : ನಿಜಗುಣಾನಂದ ಸ್ವಾಮೀಜಿಗಳು ಕರ್ನಾಟಕದ ಪ್ರಮುಖ ವಿಚಾರವಾದಿ, ಪ್ರಗತಿಪರ ಚಿಂತಕ ಮತ್ತು ಬೈಲೂರು ನಿಷ್ಕಲ್ಮಶ ಮಠದ ದಾರ್ಶನಿಕರು. ಬಸವ ತತ್ವ ಮತ್ತು ವೈಚಾರಿಕತೆಯನ್ನು ಎತ್ತಿ ಹಿಡಿಯುವ ಇವರು, ಮೂಢನಂಬಿಕೆಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದು, ಸಾಮಾಜಿಕ ಸಮಾನತೆಗಾಗಿ ಧ್ವನಿ ಎತ್ತುವ ಮೂಲಕ ಜನಪ್ರಿಯರಾಗಿದ್ದಾರೆ.
ಸಮಾಜದಲ್ಲಿನ ಮೂಢನಂಬಿಕೆಗಳು, ಜಾತಿ ವ್ಯವಸ್ಥೆ ಮತ್ತು ಅಂಧಶ್ರದ್ಧೆಯನ್ನು ತೀವ್ರವಾಗಿ ಟೀಕಿಸುತ್ತಾರೆ. ಬಸವಣ್ಣನವರ ವಚನಗಳು ಮತ್ತು ವಿಚಾರಧಾರೆಯನ್ನು ಆಧುನಿಕ ಸಮಾಜಕ್ಕೆ ಅನ್ವಯಿಸಿ ಜನರಿಗೆ ತಿಳಿಸಿಕೊಡುತ್ತಾರೆ. ಧಾರ್ಮಿಕ ಮೌಢ್ಯಗಳ ವಿರುದ್ಧ ನೇರ ಮತ್ತು ನಿಷ್ಠುರ ಮಾತುಗ ಮೂಲಕ ಸಾಮಾಜಿಕ ಬದಲಾವಣೆಗಾಗಿ ಶ್ರಮಿಸುತ್ತಿದ್ದಾರೆ.
“ಅತಿಯಾದ ವೈಚಾರಿಕತೆ ಮನುಷ್ಯರನ್ನು ಸ್ವೇಚ್ಛಾಚಾರಕ್ಕೆ ತೆಗೆದುಕೊಂಡು ಹೋಗುತ್ತದೆ. ಅದೇ ರೀತಿ, ಅತಿಯಾದ ಮೂಢನಂಬಿಕೆ ಮನುಷ್ಯನನ್ನು ಅಧಃಪತನಕ್ಕೆ ಕರೆದೊಯ್ಯುತ್ತದೆ. ತಾಯಿ ಹೃದಯದ ಮನೋಭಾವ ಇರುವಂತಹ ವ್ಯಕ್ತಿಗಳು ಮಾತ್ರ ಸುಂದರ ಸಮಾಜವನ್ನು ಕಟ್ಟಲು ಸಾಧ್ಯ. ಅಂತಹ ಹೃದಯ ಮನುಷ್ಯನಿಗೆ ಬಹಳ ಮುಖ್ಯ” ಎಂದು ಸ್ವಾಮೀಜಿ ಯಾವಾಗಲೂ ಹೇಳುತ್ತಿರುತ್ತಾರೆ.

ವೈಚಾರಿಕತೆ ಅಂದರೆ ಮನುಷ್ಯತ್ವ ಉಳಿಸುವುದು :
“ವೈಚಾರಿಕತೆ ಅಂದರೆ ಸಂಪ್ರದಾಯ ವಿರೋಧಿಸುವುದು ಎಂದು ಹಲವರು ತಿಳಿದುಕೊಂಡಿದ್ದಾರೆ. ವಾಸ್ತವದಲ್ಲಿ ಸಂಪ್ರದಾಯ ವಿರೋಧಿಸುವುದು ವೈಚಾರಿಕತೆಯಲ್ಲ. ಮನುಷ್ಯತ್ವವನ್ನು ಉಳಿಸುವುದೇ ನಿಜವಾದ ವೈಚಾರಿಕತೆ” ಎಂದು ಸ್ವಾಮೀಜಿ ಸ್ಪಷ್ಟವಾಗಿ ಹೇಳುತ್ತಾರೆ.
“ಅತಿಯಾದ ವೈಚಾರಿಕತೆ ಮನುಷ್ಯರನ್ನು ಸ್ವೇಚ್ಛಾಚಾರಕ್ಕೆ ತೆಗೆದುಕೊಂಡು ಹೋಗುತ್ತದೆ. ಅದೇ ರೀತಿ, ಅತಿಯಾದ ಮೂಢನಂಬಿಕೆ ಮನುಷ್ಯನನ್ನು ಅಧಃಪತನಕ್ಕೆ ಕರೆದೊಯ್ಯುತ್ತದೆ. ತಾಯಿ ಹೃದಯದ ಮನೋಭಾವ ಇರುವಂತಹ ವ್ಯಕ್ತಿಗಳು ಮಾತ್ರ ಸುಂದರ ಸಮಾಜವನ್ನು ಕಟ್ಟಲು ಸಾಧ್ಯ” ಎಂಬುದು ಅವರ ಜೀವನ ದರ್ಶನವಾಗಿದೆ. ಇದರಂತೆ ಶ್ರೀಗಳ ವೈಚಾರಿಕ ಜೀವನ ಸಾಗುತ್ತಿದೆ.

ಅನ್ನವೇ ಮೊದಲು, ಆಮೇಲೆ ದೇವರು:
“ಮನುಷ್ಯನಿಗೆ ದೇವರು-ಧರ್ಮಕ್ಕಿಂತ ಮೊದಲು ಅನ್ನದ ಅಗತ್ಯವಿದೆ. ಅನ್ನ, ಅರಿವು, ಔಷಧ ಹಾಗೂ ಆಶ್ರಯವನ್ನು ಮನುಷ್ಯನಿಗೆ ಮೂಲಭೂತವಾಗಿ ಒದಗಿಸಬೇಕೆಂದು ಬಸವಣ್ಣನವರು ಹೇಳಿದ್ದಾರೆ”ಎಂದು ಸ್ವಾಮೀಜಿ ನೆನಪಿಸುತ್ತಾರೆ. ಅಂತೆಯೇ “ದೇವರು ಮತ್ತು ಧರ್ಮದ ಬಗ್ಗೆ ಸರಿಯಾದ ರೀತಿಯ ಪರಿಕಲ್ಪನೆ ಕೊಡಬೇಕಾಗಿದೆ. ಇವುಗಳ ಬಗ್ಗೆ ಸರಿಯಾದ ಪರಿಕಲ್ಪನೆ ನೀಡದಿದ್ದರೆ ಧಾರ್ಮಿಕ ಮುಖಂಡರು ಜನರನ್ನು ಗ್ರಾಹಕರಂತೆ ನೋಡುತ್ತಾರೆ” ಎಂದು ಎಚ್ಚರಿಸುತ್ತಾರೆ.

ಪಂಚಾಂಗದ ಭಯೋತ್ಪಾದನೆಗೆ ಪ್ರಹಾರ :
“ದೇಶ ಇಂದು ಪಂಚಾಂಗದವರ ಕೈಯಲ್ಲಿ ಸಿಲುಕಿದೆ. ಇದು ಬಹಳ ಅಪಾಯಕಾರಿ. ಭಯೋತ್ಪಾದಕರಷ್ಟೇ ಇವರು ನಮ್ಮನ್ನು ಭಯಗೊಳಿಸುತ್ತಾರೆ” ಎಂದು ಸ್ವಾಮೀಜಿ ತರಾಟೆಗೆ ತೆಗೆದುಕೊಳ್ಳುತ್ತಾರೆ. 
“ಬೆಳಗ್ಗೆ ಎದ್ದರೆ ಒಬ್ಬೊಬ್ಬರು ಒಂದೊಂದು ಟಿವಿಯಲ್ಲಿ ಹೋಗಿ ಕೂರುತ್ತಾರೆ. ಒಬ್ಬ ನಿಲುವು, ಒಬ್ಬ ಅಡ್ಡನಾಮ ಹಾಕಿರ್ತಾರೆ. ಬಡವರನ್ನು ಶ್ರೀಮಂತರನ್ನಾಗಿ ಮಾಡುತ್ತೇವೆ ಎನ್ನುತ್ತಾರೆ. ಜನರನ್ನು ಏಮಾರಿಸುವ ಮುಖಾಂತರ ಹಣ ವಸೂಲಿ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳ ಬಗ್ಗೆ ಸಮಾಜ ಸದಾ ಜಾಗೃತಿ ವಹಿಸಬೇಕು ಎಂದು ಕರೆ ನೀಡಿದ್ದಾರೆ. ಮತ್ತು 
ಸಮಾಜವನ್ನು ಸದಾ ಕಾಲ ಎಚ್ಚರಿಸುತ್ತಾರೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸಗಳು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.

ಹಾಡಿನ ಮೂಲಕ ಜಾಗೃತಿ, ನಿಷ್ಠುರತೆಯಿಂದ ಬದಲಾವಣೆ:
ಸ್ವಾಮೀಜಿಗಳು ಸಾಮಾಜಿಕ ಸಂದೇಶಗಳನ್ನು ನೀಡುವ ಹಾಡುಗಳನ್ನು ಮತ್ತು ತತ್ವಪದಗಳನ್ನು ಹಾಡುವುದರ ಮೂಲಕ ಜನರನ್ನು ಜಾಗೃತಿಗೊಳಿಸುತ್ತಾರೆ. ವಚನ ಸಾಹಿತ್ಯ, ಬಸವಣ್ಣನವರ ತತ್ವಗಳು ಮತ್ತು ವೈಚಾರಿಕತೆಗೆ ಒತ್ತು ನೀಡುತ್ತಾರೆ.
ಅವರ ನೇರ ಮತ್ತು ನಿಷ್ಠುರ ಮಾತುಗಳಿಂದಾಗಿ ಕೆಲವು ಸಂಘಟನೆಗಳಿಂದ ಅವರಿಗೆ ಈ ಹಿಂದೆ ಬೆದರಿಕೆಗಳು ಕೂಡ ಬಂದಿದ್ದವು. ಆದರೂ ಮೌಢ್ಯ, ಜಾತಿ ಪದ್ಧತಿ, ಮತ್ತು ಮನುಧರ್ಮದ ವಿರುದ್ಧ ಧ್ವನಿ ಎತ್ತುವ ಮೂಲಕ, ಮನುಷ್ಯತ್ವ ಮತ್ತು ವೈಚಾರಿಕತೆಗೆ ಒತ್ತು ನೀಡುವ ಭಾಷಣಗಳಿಗೆ ಹೆಸರುವಾಸಿಯಾಗಿದ್ದಾರೆ.

ಕ್ರಾಂತಿಕಾರಿ ಹೆಜ್ಜೆ: ಪೂಜ್ಯ 
ನಿಜಗುಣಾನಂದ ಸ್ವಾಮೀಜಿ ಅವರು ತಮ್ಮ ಪ್ರಗತಿಪರ ಹಾಗೂ ಕ್ರಾಂತಿಕಾರಿ ವಿಚಾರಗಳಿಂದ ಕರ್ನಾಟಕದಾದ್ಯಂತ ಪ್ರಸಿದ್ಧರಾಗಿದ್ದಾರೆ. ಸನಾತನ ಧರ್ಮದ ಮೂಢನಂಬಿಕೆಗಳು, ಮನುಷ್ಯರ ನಡುವೆ ತಾರತಮ್ಯ ಉಂಟುಮಾಡುವ ಪದ್ಧತಿಗಳು ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ನೇರವಾಗಿ ಹಾಗೂ ನಿಷ್ಟುರವಾಗಿ ಮಾತನಾಡುತ್ತಿರುವುದು ಇವರ ಪ್ರಮುಖ ಕ್ರಾಂತಿಕಾರಿ ಹೆಜ್ಜೆಯಾಗಿದೆ. 
ಮನುಷ್ಯರಲ್ಲಿ ತಾರತಮ್ಯ ಬೆಳೆಸುವ 'ಮನು ಧರ್ಮ' ನಾಶವಾಗಬೇಕು ಎಂದು ನೇರವಾಗಿ ಕರೆ ನೀಡಿದ್ದಾರೆ. ಪ್ರಕೃತಿಯ ಶಕ್ತಿಗಳಾದ ಬೆಂಕಿ, ಗಾಳಿ ಮೊದಲಾದವುಗಳನ್ನು ಪೂಜಿಸುವ ಮೂಲಕ ದೈವತ್ವ ಆರೋಪಿಸುವ ಸನಾತನ ಸಂಪ್ರದಾಯವನ್ನು ಕಟುವಾಗಿ ಪ್ರಶ್ನಿಸಿದ್ದಾರೆ. ಕೇವಲ ದಲಿತರ ಉದ್ಧಾರವಲ್ಲದೆ, ಪ್ರತಿಯೊಬ್ಬರೂ ಮಾನಸಿಕ ಗುಲಾಮಗಿರಿಯಿಂದ ಹೊರಬಂದು, ಸಂವಿಧಾನ ಮತ್ತು ಮತದಾನದ ಹಕ್ಕಿನ ಮಹತ್ವವನ್ನು ಅರಿಯಬೇಕು ಎಂದು ಕ್ರಾಂತಿಕಾರಿ ಹೆಜ್ಜೆ ಹಾಕುತ್ತಿದ್ದಾರೆ.

ವೈಚಾರಿಕ ಪ್ರಜ್ಞೆ: ಪೂಜ್ಯ 
ನಿಜಗುಣಾನಂದ ಸ್ವಾಮೀಜಿಗಳು ಮನುಷ್ಯತ್ವ ಮತ್ತು ವೈಚಾರಿಕ ಚಿಂತನೆಗೆ ಹೆಚ್ಚು ಒತ್ತು ನೀಡುತ್ತಾರೆ. "ಸಂಪ್ರದಾಯಗಳನ್ನು ವಿರೋಧಿಸುವುದೇ ವೈಚಾರಿಕತೆಯಲ್ಲ, ಬದಲಿಗೆ ಮನುಷ್ಯತ್ವವನ್ನು ಉಳಿಸುವುದೇ ನಿಜವಾದ ವೈಚಾರಿಕತೆ" ಎನ್ನುವುದು ಇವರ ಸ್ಪಷ್ಟ ಅಭಿಮತ.
ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಮಾನವೀಯ ಮೌಲ್ಯಗಳು ಮತ್ತು ವೈಚಾರಿಕತೆಯ ಆಧಾರದ ಮೇಲೆ ಸಮಾಜವನ್ನು ಮುನ್ನಡೆಸಲು ಶ್ರಮಿಸುತ್ತಿದ್ದಾರೆ. ಧರ್ಮ ಮತ್ತು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಮೂಢಾಚರಣೆಗಳು, ಶೋಷಣೆ ಮತ್ತು ಮೌಢ್ಯಗಳನ್ನು ತಮ್ಮ ಪ್ರವಚನಗಳ ಮೂಲಕ ನೇರವಾಗಿ ಖಂಡಿಸುತ್ತಾರೆ.
ಮನುಷ್ಯನನ್ನು ಕಟ್ಟಿಹಾಕುವ ದೈಹಿಕ ಗುಲಾಮಗಿರಿಗಿಂತ ಮಾನಸಿಕ ಗುಲಾಮಗಿರಿ ಬಹಳ ಅಪಾಯಕಾರಿ. ಜನರು ಮೌಢ್ಯಗಳಿಂದ ಹೊರಬಂದು ವೈಜ್ಞಾನಿಕ ಮತ್ತು ಪ್ರಜ್ಞಾವಂತ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡುತ್ತಾರೆ. ಈ ವೈಚಾರಿಕ ನಿಲುವಿನಿಂದಾಗಿ ಅವರ ಪ್ರವಚನಗಳು ಜನಪ್ರಿಯವಾಗಿವೆಯಾದರೂ, ಕೆಲ ಸಂಪ್ರದಾಯವಾದಿಗಳಿಂದ ವಿರೋಧ ಮತ್ತು ಜೀವಬೆದರಿಕೆಗಳನ್ನು ಸಹ ಎದುರಿಸಬೇಕಾಗಿ ಬಂದಿದೆ. ಮತ್ತು ನಿರಂತರವಾಗಿ ಶ್ರೀಗಳಿಗೆ ಬೆದರಿಕೆ ಕರೆಗಳು ಬರುತ್ತಿರುವುದು ಈ ನಾಡಿನ ದುರಂತವೇ ಎನ್ನಬಹುದು.

ನೇರ ನಿಷ್ಠುರ ಸ್ವಾಮೀಜಿ :
ಶ್ರೀ ನಿಜಗುಣಾನಂದ ಸ್ವಾಮೀಜಿ ಅವರು ಕರ್ನಾಟಕದ ಪ್ರಸಿದ್ಧ ಚಿಂತಕರು, ಸಮಾಜ ಸುಧಾರಕರು ಮತ್ತು ಪ್ರಗತಿಪರ ಮಠಾಧೀಶರು. ಅವರು ತಮ್ಮ ನೇರ ಹಾಗೂ ನಿಷ್ಠುರ ನುಡಿಗಳಿಗೆ, ವೈಚಾರಿಕ ಚಿಂತನೆಗಳಿಗೆ ಮತ್ತು ಮೌಢ್ಯ ವಿರೋಧಿ ನಿಲುವಿಗೆ ರಾಜ್ಯದಲ್ಲಿ ಅಪಾರ ಜನಪ್ರಿಯತೆಯನ್ನು ಪಡೆದಿದ್ದಾರೆ.
ಬಸವಣ್ಣನವರ ವಚನಗಳು ಮತ್ತು ತತ್ವಗಳು ಸರಳವಾಗಿ ಜನರಿಗೆ ತಲುಪಿಸುತ್ತಾ, ಸಮಾಜದಲ್ಲಿರುವ ಮೂಢನಂಬಿಕೆ, ಜಾತಿ ಪದ್ಧತಿ ಹಾಗೂ ಶೋಷಣೆಯ ವಿರುದ್ಧ ಧ್ವನಿಯೆತ್ತುತ್ತಾರೆ. ಧರ್ಮದ ಹೆಸರಿನಲ್ಲಿ ನಡೆಯುವ ವಂಚನೆಗಳು ಮತ್ತು ರಾಜಕೀಯ ನಾಯಕರ ಲೋಪದೋಷಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ನೇರವಾಗಿ ಟೀಕಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ.

ಸಾಮಾಜಿಕ ಕಳಕಳಿ ಸ್ವಾಮಿಜಿ : ಕಿತ್ತೂರು ತಾಲೂಕಿನ ಬೈಲೂರು ಗ್ರಾಮದಲ್ಲಿರುವ 'ನಿಷ್ಕಲ ಮಂಟಪ'ದ ಮೂಲಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಈ ಆಶ್ರಮವು ಯಾವುದೇ ಧರ್ಮ, ಜಾತಿಯ ಭೇದವಿಲ್ಲದೆ ಎಲ್ಲರಿಗೂ ಮುಕ್ತವಾಗಿದೆ.
ಅಂತೆಯೇ ಸಂಪ್ರದಾಯಗಳನ್ನು ಕುರುಡಾಗಿ ನಂಬದೆ, ಮಾನವೀಯತೆಯನ್ನು ಎತ್ತಿಹಿಡಿಯುವುದೇ ನಿಜವಾದ ವೈಚಾರಿಕತೆ ಎಂದು ಪ್ರತಿಪಾದಿಸುವ ಸ್ವಾಮೀಜಿ, ಮನುಷ್ಯತ್ವ ಉಳಿಸಿಕೊಳ್ಳುವುದಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಬಸವಣ್ಣನವರ ವಚನಗಳು ಮತ್ತು ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸಲು ನಿರಂತರವಾಗಿ ಪ್ರವಚನ ಹಾಗೂ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಸೇರಿದಂತೆ ದಲಿತರು, ದಮನಿತರು ಮತ್ತು ಪ್ರಗತಿಪರರ ಧ್ವನಿಯಾಗಿ ಅನೇಕ ಜನಪರ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಸತ್ಯವನ್ನು ನಿಷ್ಟುರವಾಗಿ ಹೇಳುವ ಅವರ ದಿಟ್ಟ ನಿಲುವಿನಿಂದಾಗಿ ವೈದಿಕ ಸಂಪ್ರದಾಯವಾದಿಗಳಿಂದ ಹಲವು ಬಾರಿ ಜೀವ ಬೆದರಿಕೆ ಕರೆಗಳು ಎದುರಿಸಿದ್ದಾರೆ.
ಸಮಾಜದ ಪಿಡುಗುಗಳ ವಿರುದ್ಧ ನಿರಂತರವಾಗಿ ಧ್ವನಿಯೆತ್ತುವ ನಿಜಗುಣಾನಂದ ಶ್ರೀಗಳು ಕರ್ನಾಟಕದ ಪ್ರಮುಖ ವೈಚಾರಿಕ ಮತ್ತು ಪ್ರಗತಿಪರ ಸ್ವಾಮೀಜಿಗಳಲ್ಲಿ ಪ್ರಮುಖರು. ಸಾಮಾಜಿಕ ಕಳಕಳಿಯುಳ್ಳ ಸ್ವಾಮೀಜಿಗಳಾಗಿದ್ದಾರೆ.

ಲಿಂಗಾಯತ ಧರ್ಮದ ಸ್ವತಂತ್ರ ಕಹಳೆ :
ಜಗತ್ತಿನಲ್ಲಿ ಹಲವು ಪ್ರವಾದಿ, ಮಹಾತ್ಮರು, ಸಂತರು ದಾರ್ಶನಿಕರು ಕಾಣದ ಕಾಲ್ಪನಿಕ ದೇವರ ಬಗ್ಗೆ ಮಾತನಾಡಿದರು, ಆದರೆ, ಬಸವಣ್ಣನವರು, ವಿಜ್ಞಾನ ಮತ್ತು ವೈಚಾರಿಕತೆ ಬಗ್ಗೆ ಜನ ಜಾಗೃತಿ ಮೂಡಿಸಿದ ಮಹನೀಯರು. ಅವರು ಕಟ್ಟಿದ ಲಿಂಗಾಯತ ಧರ್ಮವನ್ನು, ಮತ್ತೆ ನಾವೆಲ್ಲರೂ ಕಟ್ಟಬೇಕಾಗಿದೆ ಎನ್ನುತ್ತಾರೆ. 
ಈ ನಿಟ್ಟಿನಲ್ಲಿ ಶ್ರೀಗಳು ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವ ಮತ್ತು ಸಮಾಜದ ಸಮಾನತೆಗಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಮೂಢನಂಬಿಕೆ, ಅಂಧಶ್ರದ್ಧೆ ಹಾಗೂ ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ಬಹಿರಂಗವಾಗಿ ಖಂಡಿಸುತ್ತಾರೆ.
ಶ್ರೀಗಳು ಲಿಂಗಾಯತ ಧರ್ಮದ ಪ್ರಮುಖ ಸ್ವತಂತ್ರ ಧರ್ಮಕ್ಕಾಗಿ ನಿರಂತರ ಹೋರಾಟ ಮಾಡುತ್ತಿದ್ದಾರೆ. ಲಿಂಗಾಯತವು ಹಿಂದೂ ಧರ್ಮದ ಭಾಗವಲ್ಲ, ಅದೊಂದು ಸ್ವತಂತ್ರ ಧರ್ಮ ಎಂದು ಬಲವಾಗಿ ವಾದಿಸುವ ಪ್ರಮುಖರಲ್ಲಿ ಇವರು ಅಗ್ರಗಣ್ಯರು. ಬಸವಣ್ಣನವರ ವಚನಗಳ ಆಧಾರದ ಮೇಲೆ ಲಿಂಗಾಯತ ಧರ್ಮದ ಅಸ್ತಿತ್ವ ಮತ್ತು ವೈಚಾರಿಕತೆಯನ್ನು ಬಿಂಬಿಸುತ್ತಿದ್ದಾರೆ.
ಮೂಢನಂಬಿಕೆ, ಜಾತಿ ಪದ್ಧತಿ ಮತ್ತು ಧಾರ್ಮಿಕ ಶೋಷಣೆಯನ್ನು ತೀವ್ರವಾಗಿ ವಿರೋಧಿಸುವ ಇವರು, ವೈಚಾರಿಕ ಚಿಂತನೆಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಜಾಗತಿಕ ಲಿಂಗಾಯತ ಮಹಾಸಭೆ ಸೇರಿದಂತೆ ವಿವಿಧ ಸಂಘಟನೆಗಳ ಜೊತೆಗೂಡಿ, ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ದೊರಕಿಸಿಕೊಡುವ ನಿರಂತರ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ.

ಹೋರಾಟ ನಿರಂತರ : ಸ್ವಾಮೀಜಿಗಳು ಕರ್ನಾಟಕ ಕಂಡ ಪ್ರಮುಖ ವೈಚಾರಿಕ ಚಿಂತಕರು, ಸಮಾಜ ಸುಧಾರಕರು ಹಾಗೂ ನಿಸ್ವಾರ್ಥ ಸೇವಕರು. ಬೈಲೂರು ನಿಷ್ಕಲ ಮಂಟಪದ ಮೂಲಕ ಸಮಾಜದಲ್ಲಿನ ಮೌಢ್ಯ, ಶೋಷಣೆ ಮತ್ತು ಮೂಢನಂಬಿಕೆಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ. ಅಂತೆಯೇ 
ಬಸವಾದಿ ಶರಣರ ವಿಚಾರಧಾರೆ ಪಾಲಿಸಿ ಎಂದು ಹೇಳುವುದು ಸುಲಭ ಆದರೆ, ಬದುಕಲ್ಲಿ ಅಳವಡಿಸಿಕೊಳ್ಳುವುದು ಬಹು ಕಷ್ಟದ ವಿಚಾರ. ಅವರ ಸಂಪೂರ್ಣ ಆದರ್ಶಗಳನ್ನು ಪಾಲಿಸಲು ಸಾಧ್ಯವಾಗದಿದ್ದರೂ ಅದರಲ್ಲಿ ಕೆಲವನ್ನಾದರೂ ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ.
ಸತ್ಯವನ್ನು ನೇರವಾಗಿ ನುಡಿಯುವ ಇವರ ವಿಚಾರವಾದದ ಹಾದಿಯಲ್ಲಿ ಹಲವು ಬೆದರಿಕೆಗಳಿದ್ದರೂ, ಬಸವ ತತ್ವದ ಆಧಾರದ ಮೇಲೆ ಸಮಾಜವನ್ನು ಮುನ್ನಡೆಸುವಲ್ಲಿ ಇವರ ಹೋರಾಟ ನಿರಂತರವಾಗಿದೆ.

ಮನುಷ್ಯತ್ವ ಉಳಿಸಿ :
ಬಸವ ತತ್ವ ಅಂದರೆ ಗದ್ದುಗೆ ಕಟ್ಟುವುದಲ್ಲ, ಗದ್ದಲ ಎಬ್ಬಿಸುವುದಲ್ಲ. ಅಸಮಾನತೆ ಕಿತ್ತೊಗೆಯುವುದು, ಮನುಷ್ಯತ್ವ ಮೆರೆಸುವುದು ನಾಗರಿಕರ ಸಮಾಜದ ಆದ್ಯ ಕರ್ತವ್ಯವಾಗಿದೆ. ಇದನ್ನೇ ಪೂಜ್ಯ ಸ್ವಾಮೀಜಿಗಳು ಮಾಡುತ್ತಿದ್ದಾರೆ. ಹಾಗೆಯೇ 
ಕಾವಿ ತೊಟ್ಟ ಮಾತ್ರಕ್ಕೆ ಸುಮ್ಮನಿರಬೇಕಿಲ್ಲ. ಅನ್ಯಾಯ ಕಂಡಾಗ ಗುಡುಗಬೇಕು. ಮಠ ಅಂದರೆ ಮೂಢನಂಬಿಕೆಯ ಕಾರ್ಖಾನೆ ಅಲ್ಲ, ವೈಚಾರಿಕತೆಯ ವಿಶ್ವವಿದ್ಯಾಲಯ ಎಂಬುದನ್ನು ಸ್ವಾಮೀಜಿ ಸಾಧಿಸಿ, ತೋರಿಸಿಕೊಟ್ಟಿದ್ದಾರೆ. ಜೊತೆಗೆ 
ಸಂಪ್ರದಾಯಗಳನ್ನು ಕುರುಡಾಗಿ ಅನುಸರಿಸುವುದಕ್ಕಿಂತಲೂ, ಮನುಷ್ಯತ್ವವನ್ನು ಎತ್ತಿಹಿಡಿಯುವುದೇ ನಿಜವಾದ ವೈಚಾರಿಕತೆ ಎಂದು ಸಾರುವ ಸ್ವಾಮೀಜಿಗಳು, ವೈಚಾರಿಕ ಹಾಗೂ ತಾತ್ವಿಕ ಚಿಂತನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆಗಳನ್ನು ಬಲವಾಗಿ ವಿರೋಧಿಸಿ, ಜನಸಾಮಾನ್ಯರಲ್ಲಿ ವೈಜ್ಞಾನಿಕ ಹಾಗೂ ಸ್ವತಂತ್ರ ಆಲೋಚನೆಗಳನ್ನು ಬೆಳೆಸಲು ಶ್ರಮಿಸುತ್ತಿದ್ದಾರೆ.

ಕೊನೆಯದಾಗಿ, ಯಾವುದೇ ಅಪೇಕ್ಷೆಗಳಿಲ್ಲದೆ, ಜಾತಿ-ಧರ್ಮಗಳ ಹಂಗಿಲ್ಲದೆ ಪ್ರತಿಯೊಬ್ಬರಿಗೂ ಮಾನವೀಯತೆಯ ಸಂದೇಶವನ್ನು ಸಾರುತ್ತಾ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಬಸವಣ್ಣನವರ ವಚನಗಳನ್ನು ಆಧುನಿಕ ಜಗತ್ತಿಗೆ ಅನ್ವಯಿಸಿ, ಸಮಾನತೆ ಮತ್ತು ಸೋದರತೆಯ ಸಂದೇಶವನ್ನು ಜನರಿಗೆ ತಲುಪಿಸುತ್ತಿದ್ದಾರೆ.
ಅವರ ಪ್ರವಚನಗಳು ಮತ್ತು ವಿಚಾರಧಾರೆಗಳು ಯುವ ಸಮುದಾಯಕ್ಕೆ ಸದಾ ಸ್ಪೂರ್ತಿಯಾಗಿವೆ. ಬಸವಣ್ಣನವರ ಕನಸಿನ ಸಮಾಜ ಕಟ್ಟಲು ಹೊರಟಿರುವ ಈ ದಾರ್ಶನಿಕರಿಗೆ ನಮ್ಮ ನಮನಗಳು.

 

ಸಂಗಮೇಶ ಎನ್ ಜವಾದಿ  
ಬರಹಗಾರರು, ಪತ್ರಕರ್ತರು, ಪರಿಸರ ಸಂರಕ್ಷಕರು, ಹೋರಾಟಗಾರರು, ಬೀದರ್ ಜಿಲ್ಲೆ 9663809340

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಗನ ಕೊಲೆಯ ಸೇಡು: ರಣಚಂಡಿಯಾದ ಹೆತ್ತವಳು! ರಕ್ತಕ್ಕೆ ರಕ್ತವೆಂದು 12 ವರ್ಷಗಳ ಬಳಿಕ ಮುಹೂರ್ತ ಇಟ್ಟ ತಾಯಿ!₹281.48 ಕೋಟಿ ಮಲ್ಲಾಬಾದ್ ಏತ ನೀರಾವರಿ ಯೋಜನೆಯಲ್ಲಿ ಅಕ್ರಮ ಆರೋಪ; ಸರ್ಕಾರದ ತನಿಖೆಗೆ ಆಗ್ರಹಫ್ರೀಡಂ ಹಬ್ಬದಲ್ಲಿ ‘ಮೋದಿ ಮೋದಿ’ ಘೋಷಣೆ; ಡಿಕೆಶಿ ಮಾತಿನಲ್ಲೇ ಜನರಿಗೆ ಟಾಂಗ್ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ದಂಡಿನ ಆಯ್ಕೆ ಮಾಡುವಂತೆ ಸಿದ್ದು ತುಮಕೂರು ಆಗ್ರಹನಕಲಿ ಎನ್‌ಕೌಂಟರ್ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ: ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಗೃಹ ಸಚಿವರಿಗೆ ಮನವಿಹಳಿಸಗರ ಸರ್ಕಾರಿ ಶಾಲೆಯ ದುಸ್ಥಿತಿ: ಪುಟಾಣಿಗಳ ಜೀವದೊಂದಿಗೆ ಚೆಲ್ಲಾಟ; ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ತಪ್ಪದುಗೃಹ ಸಚಿವರ ಘೋಷಣೆಗೆ ಸವಾಲೇ? ಶಹಾಪುರದಲ್ಲಿ ಮತ್ತೆ ಜೋರಾದ ಅಕ್ರಮ ಮರಳು ಸಾಗಾಟಒಂದು ವಾರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ: ಇಲ್ಲದಿದ್ದರೆ ಬೃಹತ್ ಪ್ರತಿಭಟನೆ – ಕರ್ನಾಟಕ ಪ್ರಾಂತ ರೈತ ಸಂಘ ಎಚ್ಚರಿಕೆಕೆನಾಲ್ ಒಡೆದು ಸಾವಿರಾರು ಲೀಟರ್ ನೀರು ಪೋಲು: ರೈತರ ಜಮೀನು ಜಲಾವೃತ, ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪದ ಆರೋಪನಾರಾಯಣಪುರ ಬಲದಂಡೆ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ: ತಕ್ಷಣ ನಿರ್ವಹಣೆಗೆ ರೈತ ಸಂಘ ಆಗ್ರಹ