K2kannadanews.in
Jayatheerth's mahimotsava ರಾಯಚೂರು : ಮಂತ್ರಾಲಯದಲ್ಲಿ (Mantralaya) ಶ್ರೀ ಜಯತೀರ್ಥರ ಮಹಿಮೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಶ್ರೀ ಜಯತೀರ್ಥರ ರಥೋತ್ಸವಕ್ಕೆ ಚಾಲನೆ ನೀಡುವ ಮೂಲಕ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಉತ್ಸವವನ್ನು ಉದ್ಘಾಟಿಸಿದರು.
https://youtu.be/pXOGmkxTXA0?si=g07UHMEROGXkEE90
ರಥೋತ್ಸವದ ನಂತರ ಉಂಜಾಳ ಮಂಟಪದಲ್ಲಿ ಶ್ರೀ ಮಠದ ಪಂಡಿತರಿಂದ ಪ್ರವಚನಗಳು ನಡೆದವು, ಶ್ರೀ ಜಯತೀರ್ಥರು ಅವರ ಆಳವಾದ ಬೋಧನೆ ಮತ್ತು ಇತಿಹಾಸವನ್ನು ಸಾರಲಾಯಿತು. ಶ್ರೀ ಜಯತೀರ್ಥರು ಅವರ ಅಸಾಧಾರಣ ಸಾಹಿತ್ಯ ಕೊಡುಗೆಗಳನ್ನು ಮಾತನಾಡಿದ ಸುಭುದೇಂದ್ರ ತೀರ್ಥರು, ನವಬೃಂದಾವನ ಗಡ್ಡಿಯಲ್ಲಿರುವ ಶ್ರೀ ಪದ್ಮನಾಭ ತೀರ್ಥರ ಮೂಲ ಬೃಂದಾವನ ಸನ್ನಿಧಾನಕ್ಕೆ, ಶ್ರೀ ಜಯತೀರ್ಥರು ನ್ಯಾಯಸುಧಾ ಗ್ರಂಥವನ್ನು ಅರ್ಪಿಸಿದ ದಿನವನ್ನು ನೆನಪಿಸುತ್ತದೆ ಎಂದು ಅವರು ಉತ್ಸವದ ಮಹತ್ವವನ್ನು ವಿವರಿಸಿದರು.