K2kannadanews.in
https://youtu.be/SkpJpGt3auQ?si=dSszR8wkHTwf2K4S
tirupati laddu ರಾಯಚೂರು: ತಿರುಪತಿಯ ಶ್ರೀನಿವಾಸನ ಸನ್ನಿಧಾನ ಸಮಸ್ತ ಹಿಂದೂಗಳ ವಿಶಿಷ್ಠ ಶ್ರದ್ದಾ ಕೇಂದ್ರ ಅಲ್ಲಿನ ಪ್ರಸಾದದಲ್ಲಿ ಕಳಪೆ, ಕಲಬೆರಿಕೆ ತುಪ್ಪದ ಬಗ್ಗೆ ಸರ್ಕಾರ ಸಮಗ್ರವಾದ ತನಿಖೆ ಕೈಗೊಳ್ಳಬೇಕು ಅಂತ ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಒತ್ತಾಯಿಸಿದ್ದಾರೆ. ಇದೇ ವೇಳೆ ರಂಗ ಮಂದಿರ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ಲಡ್ಡು ಪ್ರಸಾದ ನೀಡಲಾಯಿತು.
ರಾಯಚೂರ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಗೋವಿಂದಗಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ವೇಸಿಕೆಮೇಲೆ ಶ್ರೀನಿವಾಸನಿಗೆ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಂತ್ರಾಲಯ ಶ್ರೀಗಳು ಭಾಗವಹಿಸಿದ್ದರು. ಈ ವೇಳೆ ಶ್ರೀಗಳಿಗೆ ಸನ್ಮಾನಿಸಿ ತಿರುಪತಿ ಲಡ್ಡು ಪ್ರಸಾದ ರೂಪದಲ್ಲಿ ನೀಡಲಾಯಿತು.
https://youtu.be/JsnmbP5lOz0?si=vQ1neOG8y1V0XDDq