ಆನೇಕಲ್: ತಾಯಿ ಹಾಗೂ ಮಗಳು ಕೃಷೀಹೊಂದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಲಕ್ಷ್ಮೀ ಸಾಗರ ಗ್ರಾಮದಲ್ಲಿ ನಡೆದಿದೆ.
ತಾಯಿ ಲಾವಣ್ಯ (28) ಹಾಗೂ ಮಗಳು ಅಕ್ಷತಾ (8) ಮೃತ ದುರ್ದೈವಿಗಳು. ಶನಿವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಗಳು ಹಾಗೂ ಮೊಮ್ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಲಾವಣ್ಯ ಪೋಷಕರು ಅಳಿಯ ಸಂಪತ್ ವಿರುದ್ಧ ದೂರು ನೀಡಿದ್ದಾರೆ.
ತನಿಖೆ ನಡೆಸಿ ಸತ್ಯಾಸತ್ಯತೆ ಬಯಲಿಗೆಳೆಯುವಂತೆಬ್ ಒತ್ತಾಯಿಸಿದ್ದಾರೆ. ಸೂರ್ಯನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.