ವೃಂದಾವನ: ಗ್ಲಾಮರ್ ಲೋಕದ ಚಕ್ರವರ್ತಿಗಳಾದ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಅದ್ದೂರಿ ಜೀವನವನ್ನು ಬದಿಗಿಟ್ಟು ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ವೃಂದಾವನದ ಪ್ರೇಮಾನಂದ ಜಿ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದರು. ಇವರ ಈ ಭೇಟಿಯಲ್ಲಿ ಎಲ್ಲರ ಗಮನ ಸೆಳೆದಿದ್ದು ಇವರ ಅತ್ಯಂತ ಸರಳ ಮತ್ತು ಸುಂದರವಾದ ಉಡುಗೆ
ಅಕ್ಷಯ ತೃತೀಯದಂತಹ ಶುಭ ಸಂದರ್ಭದಲ್ಲಿ ಈ ಜೋಡಿ ವೃಂದಾವನದ ಪವಿತ್ರ ಮಣ್ಣಿನಲ್ಲಿ ಭಕ್ತಿಯ ಪರಾಕಾಷ್ಠೆಯಲ್ಲಿ ಮುಳುಗಿದ್ದರು. ಯಾವುದೇ ಅದ್ದೂರಿತನವಿಲ್ಲದೆ, ಅತ್ಯಂತ ಸರಳ ಉಡುಪಿನಲ್ಲಿ ಆಶ್ರಮಕ್ಕೆ ಆಗಮಿಸಿದ ಇವರು, ನೆಲದ ಮೇಲೆ ಕುಳಿತು ಮಹಾರಾಜರ ಪ್ರವಚನವನ್ನು ಆಲಿಸಿದರು.
ಅನುಷ್ಕಾ ಶರ್ಮಾ ಅವರ ಎಲಿಗಂಟ್ ಲುಕ್:
ಆಧ್ಯಾತ್ಮಿಕ ಭೇಟಿಗಾಗಿ ಅನುಷ್ಕಾ ಬಿಳಿ ಬಣ್ಣದ ಸುಂದರವಾದ ಕುರ್ತಾ ಸೆಟ್ ಧರಿಸಿದ್ದರು.Eka ಬ್ರ್ಯಾಂಡ್ನ ಈ ಕಾಟನ್ ಕುರ್ತಾ ಸೆಟ್ನ ಬೆಲೆ ಸುಮಾರು ₹34,300. ಮ್ಯಾಂಡರಿನ್ ಕಾಲರ್ ಮತ್ತು ಹೂವಿನ ಕಸೂತಿ ಕೆಲಸವಿದ್ದ ಈ ಉಡುಗೆಯಲ್ಲಿ ಅನುಷ್ಕಾ ಕಳೆಗುಂದದೆ ಕಂಗೊಳಿಸುತ್ತಿದ್ದರು.ಅತಿ ಸರಳ ಮೇಕಪ್, ಹಣೆಯಲ್ಲಿ ತಿಲಕ ಮತ್ತು ಕುತ್ತಿಗೆಯಲ್ಲಿ ತುಳಸಿ ಮಾಲೆ ಧರಿಸಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡರು.
ವಿರಾಟ್ ಕೊಹ್ಲಿ ಅವರ ಸಿಂಪಲ್ ಸ್ಟೈಲ್:
ಅನುಷ್ಕಾ ಅವರಿಗೆ ಮ್ಯಾಚ್ ಆಗುವಂತೆ ವಿರಾಟ್ ಕೂಡ ಅತ್ಯಂತ ಸಾಧಾರಣ ಉಡುಪಿನಲ್ಲಿ ಕಾಣಿಸಿಕೊಂಡರು.ವಿರಾಟ್ ನೇರಳೆ ಬಣ್ಣದ ಸ್ವೆಟ್ಶರ್ಟ್ ಮತ್ತು ಬಿಳಿ ಬಣ್ಣದ ಲಿನಿನ್ ಪ್ಯಾಂಟ್ ಧರಿಸಿದ್ದರು.ದುಬಾರಿ ಅಕ್ಸೆಸರೀಸ್ಗಳ ಬದಲು ರೌಂಡ್ ಫ್ರೇಮ್ ಗ್ಲಾಸ್, ತುಳಸಿ ಮಾಲೆ ಮತ್ತು ತಿಲಕಧಾರಿಗಳಾಗಿ ವಿರಾಟ್ ವಿಶಿಷ್ಟವಾಗಿ ಕಂಡರು.ಈ ದಂಪತಿ ಸಾಬೀತುಪಡಿಸಿದ್ದಾರೆ ಏನೆಂದರೆ, ಸ್ಟೈಲ್ ಅಂದರೆ ಕೇವಲ ದುಬಾರಿ ಬಟ್ಟೆಗಳಲ್ಲ, ನಾವು ಹೋಗುವ ಜಾಗಕ್ಕೆ ತಕ್ಕಂತೆ ಇರುವ ಸರಳತೆ ಕೂಡ ಒಂದು ದೊಡ್ಡ ಸ್ಟೈಲ್ ಕ್ರಿಕೆಟ್ ಮತ್ತು ಸಿನಿಮಾ ಲೋಕದ ಈ ಸ್ಟಾರ್ಗಳು ಭಕ್ತಿಯ ಹಾದಿಯಲ್ಲಿ ಸಾಮಾನ್ಯರಂತೆ ನಡೆದುಕೊಂಡ ರೀತಿ ಅಭಿಮಾನಿಗಳಿಗೆ ಮಾದರಿಯಾಗಿದೆ
ಆಶ್ರಮದಲ್ಲಿ ಪ್ರೇಮಾನಂದ ಜಿ ಮಹಾರಾಜ್ ಅವರ ಪಾದಗಳಿಗೆ ನಮಸ್ಕರಿಸಿದ ದಂಪತಿಗೆ ಮಹಾರಾಜರು ಆಶೀರ್ವದಿಸಿದರು. ಈ ಭೇಟಿಯ ವಿಡಿಯೋಗಳು ಮತ್ತು ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, “ಎಷ್ಟೇ ಎತ್ತರಕ್ಕೆ ಬೆಳೆದರೂ ಸಂಸ್ಕಾರ ಮತ್ತು ಭಕ್ತಿಯನ್ನು ಮರೆಯಬಾರದು ಎನ್ನುವುದಕ್ಕೆ ಇವರೇ ಸಾಕ್ಷಿ” ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

pic.twitter.com/hyPkrRermP
(@EmediaManoj) April 20, 2026